ನೆಲ್ಲಿಕಟ್ಟೆಯಲ್ಲಿ ಓಣಂ ಹಬ್ಬ ಆಚರಣೆ

0

ಪುತ್ತೂರು: ವಜ್ರಮಾತ ಭಜನಾ ಮಂಡಳಿ ಪುತ್ತೂರು ವತಿಯಿಂದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಸಹಕಾರದೊಂದಿಗೆ ನೆಲ್ಲಿಕಟ್ಟೆ ನೇಹ ನಿಲಯದಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು.
ವಜ್ರಮಾತ ಅಧ್ಯಕ್ಷ ನಯನ ರೈ ಸ್ವಾಗತಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಹರಿಣಾಕ್ಷಿ ಜೈ ಶೆಟ್ಟಿಯವರು ಓಣಂ ಹಬ್ಬದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು. ವಜ್ರಮಾತದ ಸದಸ್ಯರಾದ ಯಮುನಾ, ಪುಷ್ಪಾವತಿ ಹೂವಿನ ರಂಗೋಲಿ ಬಿಡಿಸಿ ಸಹಕರಿಸಿದರು. ವಜ್ರಮಾತ ಕಾರ್ಯದರ್ಶಿ ಶಾರದಾ ಕೇಶವ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ವಜ್ರಮಾತ ಮಹಿಳಾ ಭಜನಾ ಮಂಡಳಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here