ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆಯಿಂದ ರಕ್ಷಾ ಬಂಧನ-ಸೇವಾ ನಿಧಿ ಹಸ್ತಾಂತರ

0

ಪುತ್ತೂರು:ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆ ಇದರ ನೇತೃತ್ವದಲ್ಲಿ ಈಶ್ವರಮಂಗಲ ಪೇಟೆಯಲ್ಲಿ ರಕ್ಷಾ ಬಂಧನ ಆಚರಿಸಿದರು. ಪ್ರತಿಯೊಬ್ಬರಿಗೂ ರಕ್ಷೆಯನ್ನು ಕಟ್ಟಿ ಸಿಹಿ ನೀಡಿ ಸಹೋದರತೆಯ ಸಂದೇಶವನ್ನು ಈ ಸಂದರ್ಭದಲ್ಲಿ ಸಾರಿದರು.ಈಶ್ವರಮಂಗಲ ಮೊಸರು ಕುಡಿಕೆ ಉತ್ಸವದ 2023 ರ ಆಮಂತ್ರಣ ಪತ್ರಿಕೆಯನ್ನು ಪೇಟೆಯಲ್ಲಿ ಹಂಚಲಾಯಿತು.

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅತ್ಯಂತ ಬಡ ಕುಟುಂಬಕ್ಕೆ ಸೇರಿದ ವಜ್ರ ಮೂಲೆ ಕಾಲೋನಿಯ ಜಯ ಎಂಬವರಿಗೆ ಸಂಘಟನೆಯಿಂದ ಸಂಗ್ರಹವಾದ ಸೇವಾ ನಿಧಿ ರೂ 30,000ವನ್ನು ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆ ಗೌರವಾಧ್ಯಕ್ಷ ಕೃಷ್ಣ ಭಟ್ ಮುಂಡ್ಯ ಅವರ ನೇತೃತ್ವದಲ್ಲಿ ನೀಡಲಾಯಿತು. ಸಂಘಟನೆಯ ಪ್ರಾಂತ, ಜಿಲ್ಲೆ, ತಾಲೂಕು ಮತ್ತು ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here