ಮಳೆಗಾಗಿ ವಿವೇಕ ಜಾಗೃತ ಬಳಗದಿಂದ ವರುಣ ಮಂತ್ರ ಜಪ

0

ಪುತ್ತೂರು:ಈ ವರ್ಷ ಮಳೆಯ ಪ್ರಮಾಣ ಬಹಳಷ್ಟು ಕಡಿಮೆಯಾಗಿದ್ದು ಜನತೆ ಚಿಂತಾಕ್ರಾಂತರಾಗಿದ್ದಾರೆ.ಈ ನಡುವೆ ವರುಣನ ಕೃಪೆಗಾಗಿ ವಿಶೇಷ ಪೂಜೆ,ಪ್ರಾರ್ಥನೆಗಳು ನಡೆಯುತ್ತಿವೆ.

ವಿವೇಕ ಜಾಗೃತ ಬಳಗದ ವತಿಯಿಂದ ಮಳೆಗಾಗಿ ನಿರಂತರವಾಗಿ ಅಲ್ಲಲ್ಲಿ ಸಾಮೂಹಿಕವಾಗಿ ವರುಣ ಮಂತ್ರ ಜಪ ನಡೆಯುತ್ತಿದೆ.ಆ.31ರಂದು ಶ್ರೀಮತಿ ಕಿಶೋರಿ ನೆಲಪ್ಪಾಲು ಇವರ ಮನೆಯಲ್ಲಿ ವರುಣ ಮಂತ್ರ ಜಪ ನಡೆಯಿತು.ಬಳಗದ 12 ಮಂದಿ ಪಾಲ್ಗೊಂಡಿದ್ದರು.

ವರುಣನ ಕೃಪೆಗಾಗಿ ವಿವೇಕ ಜಾಗೃತ ಬಳಗದಿಂದ ಈ ರೀತಿ ವರುಣ ಮಂತ್ರ ಜಪ ನಿರಂತರವಾಗಿ ನಡೆಯುತ್ತಿದೆ ಎಂದು ಬಳಗದ ಜಯಂತ ಹೆಗ್ಡೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here