ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಇವರ ವತಿಯಿಂದ ಇ.ಎಸ್.ಆರ್ ಪ್ರೆಸಿಡೆನ್ಸಿ ಶಾಲೆ ಮರೀಲ್ – ಪುತ್ತೂರು ಇಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಎರಡೂ ವಿಭಾಗಗಳಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಕಿರಿಯ ಪ್ರಾಥಮಿಕ ವಿಭಾಗ- ತನ್ವೀಶ್ , ಚಿತ್ರಕಲೆ-ಪ್ರಥಮ, ಸಾನ್ವಿ ಕ್ಲೇ ಮಾಡೆಲಿಂಗ್-ಪ್ರಥಮ, ಮಾತಂಗಿ ಭಕ್ತಿಗೀತೆ -ಪ್ರಥಮ, ಸುದೀಪ್ತ,ಕನ್ನಡ ಕಂಠಪಾಠ- ದ್ವಿತೀಯ, ಮಾತಂಗಿ, ಲಘುಸಂಗೀತ – ದ್ವಿತೀಯ, ಶ್ರುತಿ ಅಭಿನಯ ಗೀತೆ-ತೃತೀಯ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ, ಶ್ರೀ ಕೃಷ್ಣ ಆಶುಭಾಷಣ- ಪ್ರಥಮ, ಅದ್ವಿತ್ ಚಿತ್ರಕಲೆ – ಪ್ರಥಮ, ವಿಘ್ನೇಶ್ ವಿಶ್ವಕರ್ಮ- ಕ್ಲೇ ಮಾಡಲಿಂಗ್-ಪ್ರಥಮ, ತ್ರಿಸ್ಥಾ ಭಟ್ ಹಿಂದಿ ಕಂಠಪಾಠ- ದ್ವಿತೀಯ, ಮುಕುಂದ ಧಾರ್ಮಿಕ ಪಠಣ – ದ್ವಿತೀಯ, ಶ್ರೇಯಸ್ ರಾವ್- ಲಘುಸಂಗೀತ -ದ್ವಿತೀಯ, ಚಿರಾಗ್ -ಮಿಮಿಕ್ರಿ- ದ್ವಿತೀಯ, ಕೃತಿಕಾ, ಕಥೆ ಹೇಳುವುದು-ತೃತೀಯ, ಶಿಲ್ಪ-ಅಭಿನಯ ಗೀತೆ- ತೃತೀಯ, ಕರಣ್ ಗೌಡ – ಭಕ್ತಿಗೀತೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here