ವಿ.ಹಿಂ.ಪ ಕಡಬ ಪ್ರಖಂಡ ಸಮಿತಿ ರಚನೆ

0

ಗೌರವಾಧ್ಯಕ್ಷ: ವಾಸುದೇವ ಭಟ್, ಅಧ್ಯಕ್ಷ: ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ: ಜಯಂತ ಕಲ್ಲುಗುಡ್ಡೆ

ಕಡಬ: ವಿಶ್ವ ಹಿಂದೂ ಪರಿಷತ್ ಕಡಬ ಪ್ರಖಂಡ ಇದರ ನೂತನ ಸಮಿತಿಯನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ವಾಸುದೇವ ಭಟ್ ಕಡ್ಯ, ಅಧ್ಯಕ್ಷರಾಗಿ ರಾಧಾಕೃಷ್ಣ ಕೋಲ್ಪೆ ಅವರು ಮರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಯಾಗಿ ಜಯಂತ ಕಲ್ಲುಗುಡ್ಡೆ, ಬಜರಂಗದಳ ಸಂಯೋಜಕರಾಗಿ ರಾಜೇಶ್ ಉದನೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸುದರ್ಶನ ಶಿರಾಡಿ, ಸಂತೋಷ್ ಅಡ್ಡಹೊಳೆ, ಸಹ ಕಾರ್ಯದರ್ಶಿಯಾಗಿ ಪ್ರಮೀಳಾ ಲೋಕೇಶ್, ಮಾತೃಶಕ್ತಿ ಪ್ರಮುಖ್ ಆಗಿ ಪ್ರೇಮಲತಾ ಕೇಪುಂಜ, ಸಹಪ್ರಮುಖ್ ಆಗಿ ವೀಣಾರಮೇಶ್ ಕೊಲ್ಲೆಸಾಗು, ಪುಷ್ಪಪ್ರಸಾದ್ ಆಯ್ಕೆಯಾಗಿದ್ದಾರೆ. ದುರ್ಗಾ ವಾಹಿನಿ ಸಂಯೋಜಕಿಯಾಗಿ ದೇವಕಿ ಪೂವಲ, ಸತ್ಸಂಗ ಪ್ರಮುಖ್ ಆಗಿ ಮೈನಾ ರಾಜೇಶ್ ಆಯ್ಕೆಯಾಗಿದ್ದಾರೆ. ಸುರಕ್ಷಾ ಪ್ರಮುಖ್ ಆಗಿ ದಯಾನಂದ ಅಡ್ಡಹೊಳೆ, ಗೋ ರಕ್ಷಕ್ ಪ್ರಮುಖ್ ಆಗಿ ಉಲ್ಲಾಸ್ ಪಂಜೋಡಿಯವರುಗಳು ಆಯ್ಕೆಯಾಗಿದ್ದಾರೆ. ಇತ್ತಿಚೆಗೆ ನಡೆದ ಗಾಣಿಗರ ಸಭಾಭವನದಲ್ಲಿ ನಡೆದ ಪುತ್ತೂರು ಜಿಲ್ಲಾ ಅಭ್ಯಾಸವರ್ಗದಲ್ಲಿ ಪದಾಧಿಕಾರಿಗಳ ಘೋಷಣೆ ಮಾಡಲಾಗಿದೆ.

LEAVE A REPLY

Please enter your comment!
Please enter your name here