ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಉಪ್ಪಿನಂಗಡಿ ಶಾಖೆಯಲ್ಲಿ ಸ್ಥಾಪನಾ ದಿನಾಚರಣೆ

0

ಉಪ್ಪಿನಂಗಡಿ:ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಸ್ಥಾಪನೆಗೊಂಡು ಯಶಸ್ವಿ 21 ವರ್ಷಗಳನ್ನು ಪೂರೈಸಿ 22ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದ್ದು, ಈ ಹಿನ್ನಲೆಯಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಉಪ್ಪಿನಂಗಡಿ ಶಾಖೆಯಲ್ಲಿ ಸ್ಥಾಪನಾ ದಿನಾಚರಣೆಯನ್ನು ಸೆ.2ರಂದು ಆಚರಿಸಲಾಯಿತು.

ನಿರ್ದೇಶಕರು ಹಾಗೂ ಉಪ್ಪಿನಂಗಡಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ಗೌಡ ಕರ್ಮಲ ದೀಪ ಪ್ರಜ್ವಲಿಸಿ, ಸಂಘದ ಎಲ್ಲಾ ಸಂಸ್ಥಾಪಕರನ್ನು ಸ್ಮರಿಸಿ, ಸಹಕಾರ ಸಂಘದ ಬೆಳವಣಿಗೆಯ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರು, ಸಲಹಾ ಸಮಿತಿ ಉಪಾಧ್ಯಕ್ಷರು ಸಂಜೀವ ಗೌಡ ಕುದ್ಲೂರು, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ್ ಕೆ, ಉಪ್ಪಿನಂಗಡಿ ಶಾಖ ಸಲಹಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ಉಪ್ಪಿನಂಗಡಿ, ರಮೇಶ್ ಗೌಡ ಬೇರಿಕೆ,ಶೀನಪ್ಪ ಗೌಡ ವಳಕಡಮ, ಸುರೇಶ್ ಕೆ ಬಿದಿರಾಡಿ, ಪುತ್ತೂರು ಎಪಿಯಂಸಿ ರಸ್ತೆ ಶಾಖೆಯ ಸಿಬ್ಬಂದಿ ಯಶ್ವಿತ್ ಹೆಚ್ ಉಪಸ್ಥಿತರಿದ್ದರು. ಶಾಖ ಮೆನೇಜರ್ ದಿನೇಶ್ ಪಿ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಅಮಿತಾ ಡಿ, ಶಿವಕುಮಾರ್, ಚೇತನ್ ಕುಮಾರ್, ಸುರೇಶ್ ಕೆ, ಪಿಗ್ಮಿ ಸಂಗ್ರಾಹಕಾರದ ಪದ್ಮನಾಭ ಪಿ, ಮೋನಪ್ಪ ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here