ಚೆನ್ನಾವರ: ರಸ್ತೆಬದಿಯ ಬೇಲಿಗೆ ಡಿಕ್ಕಿಯಾದ ಪಿಕಪ್

0

ಸವಣೂರು: ಪಾಲ್ತಾಡಿ ಗ್ರಾಮದ ತಾರಿಪಡ್ಪು-ಚೆನ್ನಾವರ ರಸ್ತೆಯ ಮಧ್ಯೆ ಪಟ್ಟೆ ನರೇಂದ್ರ ರಸ್ತೆ ಕ್ರಾಸ್ ಬಳಿ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಬೇಲಿಗೆ ಡಿಕ್ಕಿಯಾದ ಬಗ್ಗೆ ಸೆ.3ರಂದು ವರದಿಯಾಗಿದೆ.
ಡಿಕ್ಕಿ ಹೊಡೆದ ಪರಿಣಾಮ ಪಿಕಪ್‌ನ ಮುಂಭಾಗಕ್ಕೆ ಹಾನಿಯಾಗಿದೆ. ತಾರಿಪಡ್ಪು-ಚೆನ್ನಾವರ ರಸ್ತೆಯು ಕಳೆದ ಮಾರ್ಚ್‌ನಲ್ಲಿ ಅಭಿವೃದ್ದಿಯಾಗಿದ್ದು, ರಸ್ತೆಯಲ್ಲಿ ವಾಹನಗಳು ವೇಗವಾಗಿ ಬರುತ್ತಿದ್ದು,ತಿರುವಿನಲ್ಲಿ ಅಪಘಾತಕ್ಕೆ ಕಾರಣವಾಗುತ್ತಿದೆ. ಇದೇ ಸ್ಥಳದಲ್ಲಿ 2 ತಿಂಗಳ ಹಿಂದೆ ಕಾರೊಂದು ಬೇಲಿಗೆ ಡಿಕ್ಕಿಯಾಗಿತ್ತು. ಸೂಚನಾ ಫಲಕ ಅಳವಡಿಸಲು ಒತ್ತಾಯ ಈ ರಸ್ತೆಯಲ್ಲಿ ತಿರುವುಗಳಿದ್ದು, ಅಂತಹ ಸ್ಥಳದಲ್ಲಿ ಸೂಚನಾ ಫಲಕ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here