ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ- ವಿವೇಕಾನಂದ ಆ.ಮಾಶಾಲಾ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

0

ಪುತ್ತೂರು: ವಿದ್ಯಾಭಾರತಿ ಸಂಯೋಜಿತ ಶಾಲೆಗಳ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಹನುಮಾನ್‍ನಗರ, ಕಲ್ಲಡ್ಕ ಇವರ ಆಶ್ರಯದಲ್ಲಿ ಆಫಿಸರ್ಸ್ ಕ್ಲಬ್ ಪುತ್ತೂರು ಇಲ್ಲಿ ಆ.23ರಂದು ನಡೆಯಿತು. ಈ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಬಾಲಕರ ತಂಡ ಬಾಲವರ್ಗದ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಪ್ರಾಂತೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವಿದ್ಯಾರ್ಥಿಗಳ ವಿವರ:
ಆದ್ಯತ್.ಆರ್: 6 ನೇ ತರಗತಿ(ಶ್ರೀ ಎ.ರಂಜಿತ್ ಮತ್ತು ಶ್ರೀಮತಿ ವತ್ಸಲಾ ದಂಪತಿ ಪುತ್ರ), ಇಶಾನ್..ಕೆ, 7 ನೇ ತರಗತಿ(ಶ್ರೀ ನಾರಾಯಣ ಮೂರ್ತಿ.ಕೆ  ಮತ್ತು ಶ್ರೀಮತಿ ಪ್ರೇಮಲತ ದಂಪತಿ ಪುತ್ರ), ಜಶ್.ಎಚ್.ಬಿ, 6 ನೇ ತರಗತಿ(ಶ್ರೀ ಹೇಮಚಂದ್ರ.ಬಿ ಮತ್ತು ಶ್ರೀಮತಿ ಶುಭಶ್ರೀ.ಹೆಚ್ ದಂಪತಿ ಪುತ್ರ), ಹಿತನ್ ಕುಮಾರ್, 7 ನೇ ತರಗತಿ(ಶ್ರೀ ಉದಯ ಕುಮಾರ್ ಮತ್ತು ಶ್ರೀಮತಿ ಲಲಿತಾ ದಂಪತಿ ಪುತ್ರ). 

LEAVE A REPLY

Please enter your comment!
Please enter your name here