ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸವಾರಿ ಮಂಟಪದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ : ಮೊಸರು ಕುಡಿಕೆ,ಅಟ್ಟಿ ಮಡಿಕೆ ಉತ್ಸವ

0

ಸುಬ್ರಹ್ಮಣ್ಯ: ಪ್ರಾಚೀನ ಆಚರಣೆಗಳಲ್ಲಿ ಸಹೋದರತೆ ಅಡಗಿದೆ.ಪ್ರತಿ ಆಚರಣೆಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಸಂಬಂಧಗಳು ವೃದ್ಧಿಯಾಗುತ್ತದೆ. ಸಂಸ್ಕೃತಿ ಭವ್ಯ ವಿಚಾರಧಾರೆಗಳು ಯುವ ಜನಾಂಗದಲ್ಲಿ ಅಚ್ಚಳಿಯದೆ ಉಳಿಯಲು ಉತ್ಸವಗಳು ಅಡಿಪಾಯವಾಗಿದೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಹೇಳಿದರು.

ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸವಾರಿ ಮಂಟಪದಲ್ಲಿ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿಯ ಆಶ್ರಯದಲ್ಲಿನಡೆದ 19ನೇ ಮೊಸರು ಕುಡಿಕೆ ಸ್ಪರ್ಧೆ ಮತ್ತು ಪ್ರಥಮ ವರ್ಷದ ಅಟ್ಟಿ ಮಡಿಕೆ ಉತ್ಸವ ಉದ್ಘಾಟಿಸಿ ಮಾತನಾಡಿದರು.

ಪ್ರಾಚೀನ ವಿಚಾರಗಳ ಜ್ಞಾನ ಪುನರುತ್ಥಾನಗೊಳ್ಳಲು ಉತ್ಸವಗಳ ಪಾತ್ರ ಅನನ್ಯ.ಮಕ್ಕಳಿಗೆ ಉತ್ಸವಗಳ ಬಗ್ಗೆ ಹೆಚ್ಚಿನ ಮಾಹಿತಿ ಮಾ ಅದರ ಆಚರಣೆಗಳ ಅಗತ್ಯತೆಯ ಕುರಿತು ತಿಳಿಸುವ ಕಾರ್ಯವಾಗಬೇಕು.ಇದರಿಂದ ಮಕ್ಕಳ ಮನಸಿನಲ್ಲಿ ಪ್ರಾಚೀನ ಆಚರಣೆಗಳು ಅಚ್ಚಳಿಯದೆ ನಿಲ್ಲಲು ಸಾಧ್ಯವಿದೆ ಎಂದು ಡಾ.ನಿಂಗಯ್ಯ ಹೇಳಿದರು.ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಉತ್ಸವ ಸಮಿತಿಯ ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್, ಕಾರ್ಯದರ್ಶಿ ವಿನ್ಯಾಸ್ ಹೊಸೋಳಿಕೆ ವೇದಿಕೆಯಲ್ಲಿದ್ದರು. ದಶಮಾನೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಎನ್.ಎಸ್, ಪೂರ್ವಾಧ್ಯಕ್ಷರಾದ ಲೋಕೇಶ್ ಬಿ.ಎನ್, ರವಿ ಕಕ್ಕೆಪದವು, ಶ್ರೀಕೃಷ್ಣ ಶರ್ಮ, ಡಾ.ಸಿದ್ದಲಿಂಗ ಎಸ್.ಎಸ್ ವೆಂಕಟೇಶ್ ಎಚ್.ಎಲ್, ಶಿವರಾಮ್.ಕೆ, ನಿತಿನ್ ಭಟ್, ಆದರ್ಶ ಕೆ.ಆರ್, ವೇಣುಗೋಪಾಲ ಎನ್.ಎಸ್, ನಿಕಟಪೂರ್ವಾಧ್ಯಕ್ಷ ಪ್ರಕಾಶ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಕಾರ್ಯದರ್ಶಿ ವಿನ್ಯಾಸ್ ಹೊಸೋಳಿಕೆ ಸ್ವಾಗತಿಸಿದರು. ಪೂರ್ವಾಧ್ಯಕ್ಷ ದೀಪಕ್ ನಂಬಿಯಾರ್ ವಂದಿಸಿದರು. ಸಮಿತಿ ಸಂಚಾಲಕ ರತ್ನಾಕರ.ಎಸ್ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here