ಸನಾತನ ಧರ್ಮನಿಂದನೆ ಹೇಳಿಕೆ ಆರೋಪ: ತಮಿಳುನಾಡು ಮುಖ್ಯಮಂತ್ರಿ ಪುತ್ರ, ಹೇಳಿಕೆಯನ್ನು ಸಮರ್ಥಿಸಿದರೆನ್ನಲಾದ ಚಿತ್ರನಟ,ಗೃಹ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುತ್ತೂರು ಪೊಲೀಸರಿಗೆ ದೂರು

0

ಪುತ್ತೂರು: ಸನಾತನ ಹಿಂದೂ ಧರ್ಮವನ್ನು ಡೆಂಘಿ ರೋಗಕ್ಕೆ ಹೋಲಿಸಿ ಉದ್ದೇಶಪೂರ್ವಕವಾಗಿ ದ್ವೇಷ ಪೂರಿತ ಮಾತುಗಳಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಹೇಳಿಕೆ ನೀಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲೀನ್ ಮತ್ತು ಹೇಳಿಕೆಯನ್ನು ಸಮರ್ಥಿಸಿದರೆನ್ನಲಾದ ಬಹುಭಾಷ ಚಿತ್ರನಟ ಮತ್ತು ರಾಜ್ಯದ ಗೃಹ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುತ್ತೂರಿನ ನೆಲ್ಲಿಕಟ್ಟೆ ಹರಿಪ್ರಸಾದ್ ಶೆಟ್ಟಿ ಮತ್ತು ಬಾಲಚಂದ್ರ ಸೊರಕೆ ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅವರ ಹೇಳಿಕೆಗಳಿಂದ ಕೋಮು ಭಾವನೆಗಳಿಗೆ ಧಕ್ಕೆಯಾಗಿರುವುದರಿಂದ ಈ ವಿಚಾರವು ಸಾಮಾಜಿಕ ಜಾಲತಾಣ, ದೂರದರ್ಶನ ಪತ್ರಿಕೆಯಲ್ಲಿ ಪ್ರಸಾರವಾಗಿದ್ದು, ಸನಾತನ ಹಿಂದೂ ಧರ್ಮದ ಎಲ್ಲಾ ಜನರಿಗೆ ಅತ್ಯಂತ ಖೇದಕರವಾಗಿರುತ್ತದೆ. ಉದಯನಿಧಿ ಸ್ಟಾಲಿನ್ ಮತ್ತು ಸದ್ರಿ ಹೇಳಿಕೆಯನ್ನು ಸಮರ್ಥಿಸಿದ ಬಹುಭಾಷಾ ನಟ ಪ್ರಕಾಶ್ ರೈ, ಹಾಗೂ ನಮ್ಮ ರಾಜ್ಯದ ಗೃಹ ಸಚಿವರಾಗಿದ್ದುಕೊಂಡು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಡಾ.ಜಿ ಪರಮೇಶ್ವರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಪ್ರಕಾರ ಧಾರ್ಮಿಕ ಅಶಾಂತಿ ಮತ್ತು ಧರ್ಮಧರ್ಮಗಳ ಬಗ್ಗೆ ದ್ವೇಷ ರಾಜಕಾರಣದಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here