ಸೆ.17: ಮಾಡಾವು ಅಭಿನವ ಕೇಸರಿ ಆಶ್ರಯದಲ್ಲಿ ಅಯ್ಯಪ್ಪ ಭಕ್ತವೃಂದದಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಕ್ರೀಡಾಕೂಟ- ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೆಯ್ಯೂರು:ಮಾಡಾವು ಅಯ್ಯಪ್ಪ ಭಕ್ತವೃಂದ ಹಾಗೂ ಅಭಿನವ ಕೇಸರಿ ಇದರ ಆಶ್ರಯದಲ್ಲಿ ಸೆ.17ರಂದು ನಡೆಯುವ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ವಿವಿಧ ಕ್ರೀಡಾಕೂಟದ  ಆಮಂತ್ರಣ ಪತ್ರಿಕೆಯನ್ನು ದೇವರಿಗೆ ಸಮರ್ಪಿಸಿ, ದೇವಲದ ಅರ್ಚಕ  ಆನಂದ ಭಟ್ ಪೂಜೆ ಸಲ್ಲಿಸಿ, ಶ್ರೀ ಕ್ಷೇತ್ರ ಕೆಯ್ಯೂರು ವ್ಯವಸ್ಥಾಪಾನ ಸಮಿತಿ ಅಧ್ಯಕ್ಷ  ಶಶಿಧರ ರಾವ್ ಬೊಳಿಕಲ ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ  ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಣ್ಣ ಗೌಡ ಮಾಡಾವು,  ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ,ಚರಣ್ ಕುಮಾರ್ ಸಣಂಗಳ, ಅಭಿನವ ಕೇಸರಿ ಮಾಡಾವು ಅದ್ಯಕ್ಷ ಶಶಿಧರ ಆಚಾರ್ಯ ಮಾಡಾವು, ಅಯ್ಯಪ್ಪ ಭಕ್ತವೃಂದ ಅದ್ಯಕ್ಷ ಸುಬ್ರಾಯ ಗೌಡ ಮಾಡಾವು, ದಿವಾಕರ ಪೂಜಾರಿ ಪಲ್ಲತ್ತಡ್ಕ, ಯಶಸ್ವಿ, ಹರೀಶ್ ಕುಲಾಲ್, ದಿಕ್ಷೀತ್ ಅಮಿನ್, ಜಯದೀಪ್ ಗೌಡ, ಕೌಶಿಕ್ ಮಾಡಾವು, ಸಚಿನ್ ಕಂಪ, ಮಧು, ಪುರುಸೋತ್ತಮ, ಜಯಂತ ಎಸ್.ಆರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here