ಈಶ್ವರಮಂಗಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮೇನಾಲ ಒಕ್ಕೂಟದ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ

0

ಪುತ್ತೂರು: ಈಶ್ವರಮಂಗಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮೇನಾಲ ಒಕ್ಕೂಟದ ಸದಸ್ಯರಿಂದ ಸೆ.17ರಂದು ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಶೀನಪ್ಪ ಎಂ, ಸುರೇಂದ್ರ ಪಾಲಸದಗುಂಡಿ ಜಲಧರ ಕಾಲೊನಿ ನಿವಾಸಿಗಳಾದ ಆಶಾ, ಅಕ್ಷತಾ, ಸುಮ, ಬೇಬಿ, ಶ್ರೀಮತಿ ಗೀತಾ (ಒಕ್ಕೂಟದ ಅಧ್ಯಕ್ಷರು), ಮೀನಾಕ್ಷಿ, ಹರಿಣಾಕ್ಷಿ ಮತ್ತು ದೀಕ್ಷಿತ, ಸರಸ್ವತಿ ಬೆಲ್ಲಿಚೆಡವು, ಕಮಲ ಮತ್ತು ಕುಸುಮ ಸಜಂಕಾಡಿ ಭಾಗವಹಿಸಿದರು. ಅಲ್ಲದೆ ದೇವಪ್ಪ ಪೂಜಾರಿ, ಬಾಬು, ಜನಾರ್ದನ ಈಶ್ವರ ನಾಯ್ಕ ಬೆಲ್ಲಿಡದವು, ರಾಜೇಶ್ ಮತ್ತು ಅಣ್ಣಪ್ಪ ನಾಯ್ಕ ಮೇನಾಲ ಸಹಕರಿಸಿದರು. ಸ್ವಚ್ಛತಾ ಕಾರ್ಯ ಕ್ರಮ ನಡೆಯುತ್ತಿರುವಾಗ ಜನ ಜಾಗೃತಿ ವಲಯ ಅಧ್ಯಕ್ಷ ವಿಕ್ರಮ್ ರೈ ಸಾಂತ್ಯ ಮತ್ತು ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಮಂಜುನಾಥ ರೈ ಸಂತ್ಯ ರವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೇನಾಲ ಸೇವಾ ಪ್ರತಿನಿಧಿ ಸುಂದರ್ ಜಿ, ಈಶ್ವರ ಮಂಗಳ ಸೇವಾ ಪ್ರತಿನಿಧಿ ವಿದ್ಯಾ ಮತ್ತು ಕಾರ್ನೂರ್ ಸೇವಾ ಪ್ರತಿನಿಧಿ ಕುಸುಮ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here