ಸೆ.21: ಕೋಡಿಂಬಾಡಿಯಲ್ಲಿ ನ್ಯೂಸ್ ಅಕ್ಕರೆ ಲೋಕಾರ್ಪಣೆ, ಗಣೇಶ ಸಂಭ್ರಮ, ಡ್ಯಾನ್ಸ್ ಧಮಾಕ

0

ಪುತ್ತೂರು: ‘ಇದು ವಿಶ್ವಾಸದ ಧ್ವನಿ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯ ನಿರ್ವಹಿಸಲಿರುವ ‘ನ್ಯೂಸ್ ಅಕ್ಕರೆ’ಯ ಲೋಕಾರ್ಪಣೆ ಸೆ.21ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಕೋಡಿಂಬಾಡಿಯ ಸೇಡಿಯಾಪು ಕ್ರೀಡಾಂಗಣದಲ್ಲಿ ಸೇಡಿಯಾಪು ಫ್ರೆಂಡ್ಸ್ ಕ್ಲಬ್‌ನ ಸಹಕಾರದೊಂದಿಗೆ ಸೆ.21ರಂದು ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ನ್ಯೂಸ್ ಅಕ್ಕರೆ ಲೋಕಾರ್ಪಣೆಗೊಳ್ಳಲಿದೆ.

ಶಾಸಕ ಅಶೋಕ್ ಕುಮಾರ್ ರೈ ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೋಡಿಂಬಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಅಶ್ವತ್ಥಕಟ್ಟೆ ವಠಾರದಲ್ಲಿ ನಡೆಯುತ್ತಿರುವ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವದ ಶೋಭಾಯಾತ್ರೆ ಆಗಮಿಸುವ ವೇಳೆ ಅಕ್ಕರೆ ನ್ಯೂಸ್ ವತಿಯಿಂದ ಗಣೇಶ ಸಂಭ್ರಮ, ಡ್ಯಾನ್ಸ್ ಧಮಾಕ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡಬೇಕು ಎಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ, ತಾಲೂಕು ಇಂಟಕ್ ಅಧ್ಯಕ್ಷರೂ ಆಗಿರುವ ಅಕ್ಕರೆ ನ್ಯೂಸ್ ಮುಖ್ಯಸ್ಥ ಜಯಪ್ರಕಾಶ್ ಬದಿನಾರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here