ಬಲ್ಯ: ಹುಲ್ಲು ತರಲು ಹೋದ ಮಹಿಳೆ ಆಕಸ್ಮಿಕ ಕೆರೆಗೆ ಬಿದ್ದು ಸಾವು

0

ಕಡಬ: ಹಸುಗಳಿಗೆ ಹುಲ್ಲು ತರಲು ತೋಟಕ್ಕೆ ಹೋದ ಮಹಿಳೆಯೊಬ್ಬರು ತೋಟದಲ್ಲಿರುವ ಕರೆಗೆ ಜಾರಿಬಿದ್ದು ಸಾವನ್ನಪ್ಪಿದ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಯದಲ್ಲಿ ನಡೆದಿದೆ. ಬಲ್ಯ ಗ್ರಾಮದ ದೇರಾಜೆಯ ಕುಶಾಲವತಿ ಮೃತ ಮಹಿಳೆ.

ಈ ಬಗ್ಗೆ ಗೀತಾ ಎಂಬವರು ಕಡಬ ಠಾಣೆಗೆ ದೂರು ನೀಡಿ ತನ್ನ ತಂಗಿ ಕುಶಾಲವತಿ ಮನೆ ವಾರ್ತೆ ಹಾಗೂ ಕೃಷಿ ಕೆಲಸ ಮಾಡಿಕೊಂಡಿದ್ದರು. ತನ್ನ ಮೈದುನ ಚಿದಾನಂದ ಎಂಬವರು ಸೈನಿಕ ಹುದ್ದೆಯಿಂದ ನಿವೃತ್ತನಾಗಿ ಬಂದ ನಂತರ ಬಲ್ಯ ಗ್ರಾಮದ ದೇರಾಜೆ ಎಂಬಲ್ಲಿ ಜಮೀನು ಖರೀದಿಸಿ ಅಡಿಕೆ ತೋಟ ಕೃಷಿ ಹಾಗೂ ಹೈನುಗಾರಿಕೆ ಮಾಡಿಕೊಂಡಿದ್ದರು.
ಮೈದುನ ಕೆಲಸಕ್ಕೆ ಹೋಗಿದ್ದು ಹಾಗೂ ತಂಗಿಯ ಮಗನು ಕೂಡಾ ಶಾಲೆಗೆ ಹೋಗಿದ್ದ ವೇಳೆ ತನ್ನ ತಂಗಿ ಕುಶಾಲವತಿಯವರು ಹಸುಗಳಿಗೆ ಹುಲ್ಲು ತರಲು ತೋಟಕ್ಕೆ ಹೋದಾಗ ತೋಟದ ಮಧ್ಯದಲ್ಲಿರುವ ಕೆರೆಗೆ ಕಾಲು ಜಾರಿ ಬಿದ್ದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಗ ಪ್ರಜ್ವಲ್ ಎಂಬಾತ ಶಾಲೆಯಿಂದ ಮನೆಗೆ ಬಂದು ಸಾಯಂಕಾಲ ತೋಟದ ಕಡೆಗೆ ಹೋಗಿ ನೋಡಿದಾಗ ತಾಯಿಯು ಕಾಣದೇ ಇದ್ದು ಹುಲ್ಲು ಕಟ್ಟಲು ಕೊಂಡು ಹೋಗಿರುವ ಹಗ್ಗ ಕೆರೆ ಬಳಿ ಇದ್ದದ್ದನ್ನು ನೋಡಿ ಕೆರೆಯಲ್ಲಿ ಇಣುಕಿ ನೋಡಿದಾಗ ಕುಶಾಲವತಿಯ ದೇಹವು ಕಂಡಾಗ ಮೋಬೈಲ್ ಗೆ ಕರೆ ಮಾಡಿ ತನಗೆ ವಿಷಯ ತಿಳಿಸಿದ್ದಾರೆ . ಈ ಬಗ್ಗೆ ಕಡಬ ಪೊಲೀಸ್ ಠಾಣಾ ಯು ಡಿ ಆರ್ 29/2023 ಕಲಂ:174 (C) ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here