ಕೊಯಿಲ: ಬಿಎಂಎಸ್ ಆಟೋ ರಿಕ್ಷಾ ಚಾಲಕ/ಮಾಲಕರ ಸಂಘ

0

ಅಧ್ಯಕ್ಷ: ಶ್ರೀರಾಮ್, ಕಾರ್ಯದರ್ಶಿ; ದೇವಿಪ್ರಸಾದ್, ಕೋಶಾಧಿಕಾರಿ: ವಸಂತ

ರಾಮಕುಂಜ: ಬಿ.ಎಂ.ಎಸ್ ಆಟೋರಿಕ್ಷಾ ಚಾಲಕ-ಮಾಲಕರ ಸಂಘ ಪುತ್ತೂರು ಇದರ ನೂತನ ಘಟಕ ಬಿ.ಎಂ.ಎಸ್ ಆಟೋರಿಕ್ಷಾ ಚಾಲಕ-ಮಾಲಕರ ಸಂಘ ಗೋಕುಲನಗರ ಕೊಯಿಲ ಇದರ ಉದ್ಘಾಟನಾ ಕಾರ್ಯಕ್ರಮ ಗೋಕುಲನಗರ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.


ಕೊಯಿಲ ಗ್ರಾ.ಪಂ. ಉಪಾಧ್ಯಕ್ಷ ಯತೀಶ್ ಕುಮಾರ್‌ರವರು ಭಾರತ ಮಾತೆಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು ತಾಲೂಕು ಬಿ.ಎಮ್.ಎಸ್ ಅಧ್ಯಕ್ಷ ರಾಜೇಶ್ ಕೆ. ಮರೀಲ್‌ರವರು ಮಾಹಿತಿ ನೀಡಿ ಶುಭಕೋರಿದರು. ಮಾಜಿ ಅಧ್ಯಕ್ಷ ಸತೀಶ್ ಪ್ರಭು ಮಣಿಯ ಅವರು ಸಂಘದ ವಿಚಾರಧಾರೆಯ ಕುರಿತು ಮಾಹಿತಿ ನೀಡಿ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ನೂತನ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಯತೀಶ್ ಕುಮಾರ್, ಅಧ್ಯಕ್ಷರಾಗಿ ಶ್ರೀರಾಮ್, ಉಪಾಧ್ಯಕ್ಷರಾಗಿ ಸುರೇಶ್, ಕಾರ್ಯದರ್ಶಿಯಾಗಿ ದೇವಿ ಪ್ರಸಾದ್, ಕೋಶಾಧಿಕಾರಿಯಾಗಿ ವಸಂತ, ಜೊತೆ ಕಾರ್ಯದರ್ಶಿಯಾಗಿ ಅಮರನಾಥ್ ಹಾಗೂ ಇತರರನ್ನು ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ದಿನೇಶ ಭವನ ಪುರುಷರ ಕಟ್ಟೆಯ ಪಾರ್ಕಿನ ಅಧ್ಯಕ್ಷ ದಯಾನಂದ ಪ್ರಭು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here