ತಿಂಗಳಾಡಿ: ಮೆದುಳು ಜ್ವರದಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ಧನ ಸಹಾಯ

0

ಪುತ್ತೂರು: ಬ್ರೈನ್ ಟ್ಯೂಮರ್ ಮೆದುಳು ಜ್ವರದಿಂದ ಬಳಲುತ್ತಿರುವ ಮಗುವಿಗೆ ಫ್ರೆಂಡ್ಸ್ ತಿಂಗಳಾಡಿ ಇದರ ಯುವಕರು ಸಹಾಯಧನ ಹಸ್ತಾಂತರಿಸಿದರು. ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಮುಡಾಯಿ ತೋಟ ನಿವಾಸಿ ಮಮತಾ ಮತ್ತು ಶಶಿಧರ್ ರವರ ಪುತ್ರಿ 3 ವರ್ಷದ ಧನ್ಯಶ್ರೀ ಮಂಗಳೂರಿನ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಮೆದುಳು ಜ್ವರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಸುಮಾರು 10 ಲಕ್ಷ ರೂ.ವೆಚ್ಚ ತಗಲಬಹುದು ಎಂದು ವೈದ್ಯರ ತಿಳಿಸಿದ್ದು, ತೀರಾ ಕಡುಬಡವರಾದ ಇವರಿಗೆ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗಲು ಹಿನ್ನೆಲೆಯಲ್ಲಿ ದಾನಿಗಳ ನೆರವು ಕೋರಿದ್ದರು. ಇವರ ಮನವಿಗೆ ಸ್ಪಂದಿಸಿದ ಫ್ರೆಂಡ್ಸ್ ತಿಂಗಳಾಡಿ ಇದರ ಸದಸ್ಯರು ಸಾರ್ವಜನಿಕ ಗಣೇಶೋತ್ಸವದಲ್ಲಿ ಸಾರ್ವಜನಿಕರಿಂದ ಹಾಗೂ ಸಂಘದ ಸದಸ್ಯರಿಂದ ಸಂಗ್ರಹವಾದ ರೂಪಾಯಿ 10 ಸಾವಿರವನ್ನು ಮಂಗಳೂರಿನ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಬೇಟಿ ನೀಡಿ ಮಗುವಿನ ಕುಟುಂಬಕ್ಕೆ ಹಸ್ತಾಂತರ ಮಾಡಿದರು.
ಚಿಕಿತ್ಸೆಗೆ ನೆರವು ನೀಡಬಹುದು
ಮಗುವಿನ ಚಿಕಿತ್ಸೆಗೆ ಸಾಕಷ್ಟು ಹಣ ಬೇಕಾಗಿರುವುದರಿಂದ ಕುಟುಂಬ ದಾನಿಗಳ ಮೊರ ಹೋಗಿದೆ.ತಮ್ಮ ಕೈಯಲ್ಲಾದ ಸಹಾಯವನ್ನು ಮಾಡುವಂತೆ ಮಗುವಿನ ಪೋಷಕರು ವಿನಂತಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ ಶಶಿಧರ 6363147811 ಅಥವಾ ಮಮತ 7619458155 ಗೆ ಕರೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here