ಗಾಂಧಿ ಗ್ರಾಮ ಪುರಸ್ಕಾರ : ಅಂತಿಮ ಪಟ್ಟಿಯಲ್ಲಿ ಸವಣೂರು ,ಉಪ್ಪಿನಂಗಡಿ ಗ್ರಾಮ ಪಂಚಾಯತ್

0

ಪ್ರವೀಣ್ ಚೆನ್ನಾವರ

ಸವಣೂರು : ದಕ್ಷಿಣ ಕನ್ನಡ ಜಿಲ್ಲೆಯ 9 ಗ್ರಾಮ ಪಂಚಾಯತುಗಳು ಗಾಂಧಿ ಪುರಸ್ಕಾರ’ದ ಅಂತಿಮ ಘಟ್ಟ ತಲುಪಿವೆ. ತಾಲೂಕಿಗೆ ಒಂದರಂತೆ ಗ್ರಾಮ ಪಂಚಾಯತುಗಳನ್ನು ಪ್ರಶಸ್ತಿಗೆ ಅಂತಿಮ ಗೊಳಿಸಲಾಗಿದೆ. ಸೆ.21ರ ಅಪರಾಹ್ನ 3 ಗಂಟೆಯೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು.ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗದ ಹಿನ್ನೆಲೆ ಯಲ್ಲಿ ಗ್ರಾ.ಪಂ.ಗಳನ್ನು ಅಂತಿಮಗೊಳಿಸಲಾಗಿದೆ. 

ಕಡಬ ತಾಲೂಕಿನ ಸವಣೂರು ಮತ್ತು ಪುತ್ತೂರು ತಾಲೂಕಿನಿಂದ ಉಪ್ಪಿನಂಗಡಿ ಗ್ರಾಮ ಪಂಚಾಯತುಗಳು ,ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಮೂಡಬಿದ್ರೆಯ ಪುತ್ತಿಗೆ, ಮೂಲ್ಕಿಯ ಕೆಮ್ರಾಲ್, ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮ ಪಂಚಾಯತುಗಳು ಗಾಂಧಿ ಪುರಸ್ಕಾರಕ್ಕಾಗಿ ರಾಜ್ಯಕ್ಕೆ ಸಲ್ಲಿಸಿದ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.ಸುಳ್ಯ ತಾಲೂಕಿನ ಮರ್ಕಂಜ ಅಂತಿಮ ಪಟ್ಟಿಯಲ್ಲಿವೆ. ಅದೇ ರೀತಿ ಬೆಳ್ತಂಗಡಿಯಿಂದ ಬಳಂಜ, ಬಂಟ್ವಾಳ ದಿಂದ ಅಮ್ಮುಂಜೆ ಮತ್ತು 2022-23 ನೇ ಸಾಲಿನ ಗಾಂಧಿ ಪುರಸ್ಕಾರಕ್ಕಾಗಿ ರಾಜ್ಯಕ್ಕೆ ಶಿಫಾರಸುಗೊಂಡಿವೆ.

LEAVE A REPLY

Please enter your comment!
Please enter your name here