ಕೂರತ್ ಫಝಲ್ ಜುಮಾ ಮಸೀದಿಯಲ್ಲಿ ಈದ್ ಮೀಲಾದ್

0

ಕಾಣಿಯೂರು: ಕುದ್ಮಾರು ಗ್ರಾಮದ ಕೂರತ್ ಫಝಲ್ ಜುಮಾ ಮಸೀದಿಯಲ್ಲಿ ಸೆ 28 ರಂದು ಈದ್ ಮೀಲಾದ್ ಆಚರಿಸಲಾಯಿತು. ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಕೂರತ್ ಧ್ವಜಾರೋಹಣ ನೆರವೇರಿಸಿದರು. ಕೂರತ್ ಮುದರ್ರಿಸ್ ಅಬ್ದುಲ್ ಖಾದರ್ ಹನೀಫಿ ದುಆ ನೆರವೇರಿಸಿ ಮೀಲಾದ್ ಸಂದೇಶ ಭಾಷಣ ಮಾಡಿದರು. ಬಳಿಕ ಮದ್ರಸ ಮಕ್ಕಳ ಮೀಲಾದ್ ರ್ಯಾಲಿ ನಡೆಯಿತು.ಈ ಸಂದರ್ಭದಲ್ಲಿ ನಝೀರ್ ಕೂರತ್ ,ಸುಲೈಮಾನ್ ಅನ್ಯಾಡಿ,ಅಬ್ದುಲ್ಲ ನೂಜಲ್ತಡ್ಕ,ಲತೀಫ್ ಮುಸ್ಲಿಯಾರ್,ಸಿರಾಜುದ್ದೀನ್ ಹಿಮಮಿ,ಇಲ್ಯಾಸ್ ಅಂಜದಿ ಸೇರಿದಂತೆ ಜಮಾಅತಿನ ಪದಾಧಿಕಾರಿಗಳು,ಮದ್ರಸ ವಿದ್ಯಾರ್ಥಿಗಳು ಹಾಗೂ ಜಮಾಅತರು ಉಪಸ್ಥಿತರಿದ್ದರು. ಮಸೀದಿಯ ವತಿಯಿಂದ ಮಧ್ಯಾಹ್ನದ ವರೆಗೆ ಕುದ್ಮಾರು ಜಂಕ್ಷನಿನಲ್ಲಿ ಸಾರ್ವಜನಿಕರಿಗೆ ಜ್ಯೂಸ್ ವಿತರಿಸಲಾಯಿತು.

LEAVE A REPLY

Please enter your comment!
Please enter your name here