ಇಚ್ಲಂಪಾಡಿ: ಯುವಕ ನಾಪತ್ತೆ-ದೂರು

0

ನೆಲ್ಯಾಡಿ: ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಉರೆಜಾಲು ನಿವಾಸಿ ಜೋಜು ಜೋಸೆಫ್(35ವ.)ಎಂಬವರು ಕಾಣೆಯಾಗಿರುವ ಬಗ್ಗೆ ಅವರ ತಂದೆ ಟಿ.ವಿ.ಜೋಸೆಫ್‌ರವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಕೂಲಿ ಕೆಲಸ ಮಾಡುತ್ತಿದ್ದ ಜೋಜು ಜೋಸೆಫ್ ಸೆ.30ರಂದು ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಸುಬ್ರಹ್ಮಣ್ಯಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದು ರಾತ್ರಿಯಾದರೂ ವಾಪಾಸು ಮನೆಗೆ ಬಾರದೇ ಇದ್ದಾಗ ಪೋನ್ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದಾಗ ಪೋನ್ ಸ್ವಿಚ್ ಆಪ್ ಆಗಿತ್ತು. ಜೋಜು ಜೋಸೆಫ್‌ರನ್ನು ಯಾವಾಗಲೂ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಮೇಸ್ತ್ರಿ ಪ್ರಶಾಂತ್‌ರವರಿಗೆ ರಾತ್ರಿ 9 ಗಂಟೆಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ಜೋಜು ಜೋಸೆಫ್ ಈ ದಿನ ಕೆಲಸಕ್ಕೆ ಬಂದಿರುವುದಿಲ್ಲ, ಸಂಜೆ ಆತ ಹಣ ಬೇಕೆಂದು ಕೇಳಿದಾಗ ನಾನು ಆತನಿಗೆ ನೆಲ್ಯಾಡಿಗೆ ಬರ ಹೇಳಿದ್ದು ಅವನು ಸಂಜೆ 6 ಗಂಟೆಗೆ ನೆಲ್ಯಾಡಿಗೆ ಬಂದು ಹಣ ಪಡೆದು ಹೋಗಿರುವುದಾಗಿ ಮೇಸ್ತ್ರಿ ತಿಳಿಸಿರುತ್ತಾರೆ. ಬಳಿಕ ಮಗನ ಬಗ್ಗೆ ಸಂಬಂಧಿಕರ ಮನೆಯಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿದರೂ ಈ ತನಕ ಪತ್ತೆಯಾಗಿರುವುದಿಲ್ಲ. ಆದುದರಿಂದ ಕಾಣೆಯಾದ ನನ್ನ ಮಗ ಜೋಜು ಜೋಸೆಫ್‌ನನ್ನು ಪತ್ತೆ ಹಚ್ಚಿ ಕೊಡುವಂತೆ ಟಿ.ವಿ.ಜೋಸೆಫ್‌ರವರು ಅ.1ರಂದು ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here