ಅನಂತಾಡಿ ಗ್ರಾಮ ಪಂಚಾಯತ್ ನಲ್ಲಿ ಗಾಂಧಿ ಜಯಂತಿ

0

ವಿಟ್ಲ: ಅನಂತಾಡಿ ಗ್ರಾ. ಪಂ. ನಲ್ಲಿ ಮಾಹಾತ್ಮಗಾಂಧಿಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆ ಆಚರಿಸಲಾಯಿತು. ಈ ದಿನ ನರೇಗಾ ಯೋಜನೆಯ ಹಾಗೂ ಸ್ವಚ್ಚತಾ ಹಿ ಸೇವಾ ವಿಶೇಷ ಗ್ರಾಮಸಭೆ ಹಮ್ಮಿಕೊಳ್ಳಲಾಗಿತ್ತು.  ಸಭೆಯಲ್ಲಿ 24-25ನೇ ಸಾಲಿಗೆ ನರೇಗಾ ಕಾಮಗಾರಿ ಗುಚ್ಛ ತಯಾರಿಸಲಾಯಿತು. ಘನತ್ಯಾಜ್ಯ ಘಟಕದ ವಾಹನ ಚಾಲಕರು, ಸ್ವಚ್ಛತಾಗಾರರನ್ನು ಗೌರವಿಸಲಾಯಿತು. ಸ್ಥಳೀಯ ಶಾಲಾ ಮಕ್ಕಳಿಗೆ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮದ ಬಗ್ಗೆ ವಿವಿಧ  ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮ ದಲ್ಲಿ ಗ್ರಾ ಪಂ ಅಧ್ಯಕ್ಷ ರಾದ  ಸುಜಾತ ಎ.,  ಉಪಾಧ್ಯಕ್ಷರಾದ  ಸಂಧ್ಯಾ. ಕೆ.,  ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಬಿ. ಸದಸ್ಯರಾದ  ಗಣೇಶ್ ಪೂಜಾರಿ, ಕುಸುಮಾಧರ ಗೌಡ ಟಿ.  ಪುರಂದರ ಗೌಡ ಟಿ.  ಶಶಿಕಲಾ ಮಿದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here