ಬಪ್ಪಳಿಗೆ: ಸ್ಕೂಟರ್, ಓಮ್ನಿ ಡಿಕ್ಕಿ

0

ಪುತ್ತೂರು: ಬಪ್ಪಳಿಗೆ ಸಮೀಪ ಸ್ಕೂಟರ್ ಮತ್ತು ಮಾರುತಿ ಓಮ್ನಿ ನಡುವೆ ಡಿಕ್ಕಿಯಾದ ಘಟನೆ ಅ.2ರಂದು ನಡೆದಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ ಸ್ಕೂಟರ್ ಸವಾರನ ಗಾಯ ಉಲ್ಪಣಗೊಂಡ ಹಿನ್ನೆಲೆಯಲ್ಲಿ ತಡವಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಬಲ್ನಾಡು ಗ್ರಾಮದ ದೂಜ ಡಿ ಸೋಜ(54 ವ) ಎಂಬವರು ಗಾಯಗೊಂಡವರು. ಅ.2ರಂದು ಅವರು ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಕಾರ್ತಿಕ್ ಎಂಬವರು ಚಲಾಯಿಸುತ್ತಿದ್ದ ಮಾರುತಿ ಓಮ್ನಿ ಬಪ್ಪಳಿಗೆ ಸಮೀಪ ಡಿಕ್ಕಿಯಾಗಿತ್ತು. ಘಟನೆಯಿಂದ ಗಾಯಗೊಂಡ ದೂಜ ಡಿ.ಸೋಜ ಅವರಿಗೆ ಸ್ಥಳೀಯ ಕ್ಲಿನಿಕ್‌ನಲ್ಲಿ ಚಿಕಿತ್ಸೆ, ಔಷಧಿ ನೀಡಲಾಗಿತ್ತು. ಆದರೆ ಅವರಿಗೆ ಮತ್ತೆ ಗಾಯ ಉಲ್ಪಣಗೊಂಡ ಹಿನ್ನೆಲೆಯಲ್ಲಿ ಅ.5ರಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಅ.7ರಂದು ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಗಾಯಾಳು ನೀಡಿದ ದೂರಿನಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here