ಆಮಿರ್ ಹನೀಫಿ ಬನ್ನೂರುರವರಿಗೆ ಕುಟ್ಯಾಡಿ ಸಿರಾಜುಲ್ ಹುದಾದಲ್ಲಿ ಸನ್ಮಾನ

0

ಪುತ್ತೂರು: ಖಿದ್ಮಾ ಫೌಂಡೇಶನ್ ಸಂಚಾಲಕ ಹಾಗೂ ಸಿರಾಜುಲ್ ಹುದಾ ಪೂರ್ವ ವಿದ್ಯಾರ್ಥಿಯಾದ ಆಮಿರ್ ಹನೀಫಿ ಬನ್ನೂರು ಅವರ ಕವನವು ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ಪಠ್ಯ ಪುಸ್ತಕಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಕಲ್ಲಿಕೋಟೆಯಲ್ಲಿರುವ ಜಾಮಿಯಾ ಸಿರಾಜುಲ್ ಹುದಾ ಕುಟ್ಯಾಡಿಯಲ್ಲಿ ಸಿರಾಜುಲ್ ಹುದಾ ಕನ್ನಡ ವಿದ್ಯಾರ್ಥಿ ಸಂಘದ ವತಿಯಿಂದ ಆಮಿರ್ ಹನೀಫಿಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸಿರಾಜುಲ್ ಹುದಾ ಮುದರ್ರಿಸ್ ಹಾಗೂ ಕೇರಳ ರಾಜ್ಯ ಎಸ್‌ವೈಎಸ್ ರಾಜ್ಯಾಧ್ಯಕ್ಷ ಸೈಯ್ಯದ್ ತ್ವಾಹಾ ತಂಙಳ್ ಸಖಾಫಿ ಸನ್ಮಾನಿಸಿದರು. ಸಂಸ್ಥೆಯ ಅಧ್ಯಾಪಕರು ಹಾಗೂ ಕನ್ನಡ ಸಂಘದ ಮುಖ್ಯಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here