ಸೀರತ್ ಕಮಿಟಿಯಿಂದ ಮೌಲಿದ್ ಪಾರಾಯಣ

0

ಪುತ್ತೂರು: ಪುತ್ತೂರು ತಾಲೂಕು ಸೀರತ್ ಕಮಿಟಿ ಆಶ್ರಯದಲ್ಲಿ ಮೌಲಿದ್ ಪಾರಾಯಣ ಕಾರ್ಯಕ್ರಮ ಅ.14ರಂದು ಪುತ್ತೂರು ಜುಮ್ಮಾ ಮಸೀದಿ ಬಳಿಯ ಸೀರತ್ ಕಚೇರಿಯಲ್ಲಿ ನಡೆಯಿತು.

ಪುತ್ತೂರು ಮುದರಿಸ್ ಅಸಯ್ಯದ್ ಅಹಮದ್ ಪುಕೋಯಾ ತಂಞಳ್‌ರವರು ನೇತೃತ್ವ ವಹಿಸಿದ್ದರು. ಪುತ್ತೂರು ತಾಲೂಕು ಸೀರತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸುರಯ್ಯ ರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುತ್ತೂರು ಸೈಯದ್ ಮಲೆ ಮಸೀದಿಯ ಖತಿಬ್ ಉಮ್ಮರ್ ದಾರಿ ಸಾಲ್ಮರ, ಸೀರತ್ ಕಮಿಟಿಯ ವಿವಿಧ ಪದಾಧಿಕಾರಿಗಳಾದ ಕೆ.ಪಿ ಅಹಮದ್ ಹಾಜಿ ಆಕರ್ಷಣ್, ಕೆ.ಆರ್ ಹುಸೈನ್ ದಾರಿಮಿ ರೇಂಜಲಾಡಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಅಬ್ದುಲ್ ರಹಿಮಾನ್ ಆಜಾದ್ ದರ್ಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಬ್ದುಲ್ ರಹೀಮಾನ್ ಮುಸ್ಲಿಯಾರ್ ಪುತ್ತೂರು, ಸಾಲ್ಮರ ಮುಹಮ್ಮದ್ ಶರೀಫ್, ಅಬ್ದುಲ್ ಹಮೀದ್ ಸೋಂಪಾಡಿ, ಮುಹಮ್ಮದ್ ಸಾಬ್ ಕೂರ್ನಡ್ಕ, ಇಸ್ಮಾಯಿಲ್ ಸಾಲ್ಮರ, ಅಬ್ದುಲ್ ರಜಾಕ್ ಆರ್.ಪಿ., ಮಹಮ್ಮದ್ ಶರೀಪ್ ಮುಕ್ರಂಪಾಡಿ, ಪಿ.ಬಿ ಅಬ್ದುಲ್ಲ ಬಪ್ಪಳಿಗೆ, ಕೆ.ಎಂ ಅಬ್ದುಲ್ಲಾ, ಅಬ್ದುಲ್ ಅಝೀಝ್ ದರ್ಬೆ ಮೊದಲಾದವರು ಉಪಸಿತರಿದ್ದರು. ಸೀರೆ ಕಮಿಟಿಯ ಪ್ರಧಾನ ಕಾರ್ಯದರ್ಶಿ ಬಿ.ಎ ಶಕೂರ್ ಹಾಜಿ ಸ್ವಾಗತಿಸಿ ಕೋಶಾಧಿಕಾರಿ ಎಲ್.ಟಿ ಅಬ್ದುಲ್ ರಜಾಕ್ ಹಾಜಿ ವಂದಿಸಿದರು.

LEAVE A REPLY

Please enter your comment!
Please enter your name here