ಪುಣ್ಚತ್ತಾರು ಬೀರ್ನೇಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಶ್ರೀ ದೇವಿಯ ವಿಗ್ರಹ ಆಗಮನ, ಶ್ರೀ ದೇವಿಯ ಪ್ರತಿಷ್ಠಾ ಸಂಕಲ್ಪದ ಆಮಂತ್ರಣ ಬಿಡುಗಡೆ

0

ಕಾಣಿಯೂರು: ಪುಣ್ಚತ್ತಾರು ಬೀರ್ನೇಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಶ್ರೀ ದೇವಿಯ ವಿಗ್ರಹದ ಆಗಮನ ಹಾಗೂ ಶ್ರೀ ದೇವಿಯ ಮೂಲ ಮೂರ್ತಿಯ ಪ್ರತಿಷ್ಠಾ ಸಂಕಲ್ಪ ಕಾರ್ಯಕ್ರಮವು ಅ.22 ಮತ್ತು ಅ.23ರಂದು ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಬಿಡುಗಡೆಯು ಕ್ಷೇತ್ರದಲ್ಲಿ ಅ.15ರಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಮೊಕ್ತೇಸರರಾದ ಕೃಷ್ಣಪ್ಪ ಗೌಡ ಬೀರ್ನೇಲು, ವಸಂತ ಗೌಡ ಬೀರ್ನೇಲು, ಪುರುಷೋತ್ತಮ ಗೌಡ ಬೀರ್ನೇಲು, ಕುಸುಮಾಧರ ಗೌಡ ಬೀರ್ನೇಲು, ಕ್ಷೇತ್ರದ ಪ್ರಧಾನ ಅರ್ಚಕ ಚಿದಾನಂದ ಉಪಾಧ್ಯಾಯ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಶಾಂತ್ ‘ಆದಿ’ ಮುರುಳ್ಯ,ಉಪಾಧ್ಯಕ್ಷರಾದ ಪದ್ಮಯ್ಯ ಗೌಡ ಅನಿಲ, ದಿನೇಶ್ ಪೈಕ, ದಿನೇಶ್ ಮಾಳ, ಕಾರ್ಯದರ್ಶಿ ಹರೀಶ್ ಪೈಕ, ಕೋಶಾಧಿಕಾರಿ ಲಕ್ಷ್ಮಣ ಗೌಡ ಪುಣ್ಚತ್ತಾರು, ಸೇರಿದಂತೆ ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here