ಬೆಟ್ಟಂಪಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಭೆ – ಲೆಕ್ಕಾಚಾರ ಮಂಡನೆ

0

ಬೆಟ್ಟಂಪಾಡಿ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಭೆ ಅ. 15ರಂದು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ಸಮಿತಿಯ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಾಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವದ ಖರ್ಚು ವೆಚ್ಚಗಳ ಬಗ್ಗೆ ಕೋಶಾಧಿಕಾರಿ ರಂಜಿತ್‌ ತಲೆಪ್ಪಾಡಿ ವರದಿ ಮಂಡಿಸಿದರು. ಸಮಿತಿಯ ಅಧ್ಯಕ್ಷ ಪ್ರಭಾಕರ ರೈ ಬಾಜುವಳ್ಳಿ ಎಲ್ಲಾ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.


ಗೌರವಾರ್ಪಣೆ: ಮೆರವಣಿಗೆ ವೇಳೆ ಶಾಲಾ ವಾಹನದ ವ್ಯವಸ್ಥೆ ಕಲ್ಪಿಸಿಕೊಟ್ಟ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಮುಖ್ಯಗುರು ರಾಜೇಶ್‌ ಎನ್‌. ಹಾಗೂ ಚೆಂಡೆ ಮೇಳದಲ್ಲಿ ಸಹಕರಿಸಿದ ಶ್ರೀ ಮಣಿಕಂಠ ಚೆಂಡೆ ಮೇಳದ ಚೇತನ್‌ ಕುಮಾರ್‌ ರವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಧನಂಜಯ ರೆಂಜ ಸ್ವಾಗತಿಸಿದರು. ಈ ವೇಳೆ ಸಮಿತಿಯ ಸಂಚಾಲಕ ಡಾ. ಸುಬ್ರಹ್ಮಣ್ಯ ವಾಗ್ಲೆ, ಕಾರ್ಯಕರ್ತರು ಉಪಸ್ಥಿತರಿದ್ದರು.


ನೂತನ ಸಮಿತಿಗೆ ಅಧಿಕಾರ ಹಸ್ತಾಂತರ
ಮುಂದಿನ ವರ್ಷದ ಗಣೇಶೋತ್ಸವದ ನೂತನ ಸಮಿತಿಯ ಅಧ್ಯಕ್ಷ ಉಮೇಶ್‌ ಮಿತ್ತಡ್ಕ, ಕೋಶಾಧಿಕಾರಿ ವಿಶಾಖ್‌ರಾಜ್‌ ರವರಿಗೆ ಹಾಲಿ ಸಮಿತಿಯವರು ಅಧಿಕಾರ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here