ಪುತ್ತೂರು ಶಾರದೋತ್ಸವ: ಶಾರದಾ ವಿಗ್ರಹ ನಿರ್ಮಿಸಿದ ಶ್ರೀನಿವಾಸ್ ಪ್ರಭುರವರಿಗೆ ಗೌರವಾರ್ಪಣೆ

0

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ ನವರಾತ್ರಿ ಉತ್ಸವ, ಶಾರದೋತ್ಸವದಲ್ಲಿ ಶಾರದಾ ವಿಗ್ರಹ ನಿರ್ಮಿಸಿದ ಶ್ರೀನಿವಾಸ್ ಪ್ರಭುರವರಿಗೆ ಗೌರವಾರ್ಪಣೆ ಕಾರ್ಯಕ್ರಮ ಅ.23ರಂದು ರಾತ್ರಿ ನಡೆಯಿತು.
ಮೂರ್ತಿ ಶಿಲ್ಪಿ ಕಲಾವಿದ, ಫೊಟೋಗ್ರಾಫರ್‌ರಾಗಿರುವ ಶ್ರೀನಿವಾಸ ಪ್ರಭುರವರು ಕಳೆದ 25 ವರ್ಷಗಳಿಂದ ಶಾರದಾ ಭಜನಾ ಮಂದಿರದ ನವರಾತ್ರಿ ಸಂದರ್ಭದಲ್ಲಿ ಶಾರದಾ ವಿಗ್ರಹ ನಿರ್ಮಿಸಿ ಜನರಿಂದ ಮೆಚ್ಚುಗೆ ಗಳಿಸಿದ್ದರು.
ದೇವಾಲಯಗಳ ಅಧ್ಯಯನಕಾರ, ಭಜನಾ ಮಂದಿರದ ಸದಸ್ ಪಿ.ಜಿ. ಚಂದ್ರಶೇಖರ ರಾವ್, ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು, ಸಂಚಾಲಕ ಪಿ.ಜಿ. ಜಗನ್ನಿವಾಸ ರಾವ್, ಮಂದಿರದ ಅಧ್ಯಕ್ಷ ಸಾಯಿರಾಮ ರಾವ್, ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಜತೆ ಕಾರ್ಯದರ್ಶಿ ಯಶವಂತ ಆಚಾರ್ಯ, ದೇವಸ್ಥಾನದ ನಿತ್ಯಕರಸೇವಕರ ತಂಡದ ಕಾರ್ಯದರ್ಶಿ ವಸಂತ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here