ಪುತ್ತೂರು:ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಅಥ್ಲೆಟಿಕ್ ಕ್ರೀಡಾಳುಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ

0

ಪುತ್ತೂರು:ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಅಥ್ಲೆಟಿಕ್ ಕ್ರೀಡಾಳುಗಳಿಗೆ ಪುತ್ತೂರು ತಾಪಂ‌ನಿಂದ ಸಮವಸ್ತ್ರ ವಿತರಣಾ ಕಾರ್ಯಕ್ರಮ ಅ.29ರಂದು ತಾ.ಪಂ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಬದಲ್ಲಿ ಶಾಸಕ ಅಶೋಕ್‌ ಕುಮಾರ್‌ ರೈ ಮಾತನಾಡಿ ಕ್ರೀಡಾಪಟುಗಳು ಪುತ್ತೂರಿಗೆ ಕೀರ್ತಿ ತಂದಿದ್ದಾರೆ.ಸಾಧನೆ ಮಾಡಲು ಇಚ್ಚಾಶಕ್ತಿ ಮುಖ್ಯ. ಕ್ರೀಡಾಪಟುಗಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಿ ಪುತ್ತೂರಿಗೆ ಇನ್ನೂ ಹೆಚ್ಚಿನ ಕೀರ್ತಿ ತನ್ನಿ ಎಂದು ಶುಭಹಾರೈಸಿದರು.ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ ಪುತ್ತೂರಿಗೆ ಕೀರ್ತಿ ತರಬೇಕು ಎಂಬ ಉದ್ದೇಶದಿಂದ ಕ್ರೀಡಾಳುಗಳಿಗೆ ನಿರಂತರ ಪ್ರೋತ್ಸಾಹವನ್ನು ನೀಡಲಾಗುವುದು.ಕ್ರೀಡಾಳುಗಳಿಗೆ ಸಹಕಾರ ಮಾಡುವ ಮೂಲಕ ಸ್ಥೈರ್ಯ ತುಂಬುವ ಕೆಲಸವನ್ನು ಶಾಲೆ, ಇಲಾಖೆಗಳು ಮಾಡಬೇಕು ಎಂದರು. ಈ ಸಂದರ್ಬದಲ್ಲಿ ಒಟ್ಟು‌104 ಕ್ರೀಡಾಪುಟಗಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ತಾಲೂಕು ದೈಹಿಕ ಶಿಕಕ್ಷರ ಸಂಘದ ಅಧ್ಯಕ್ಷ ಸೀತಾರಾಮ ಗೌಡ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ, ಜಿಲ್ಲಾ ದೈಹಿಕ ಸಂಘದ ಪದಾಧಿಕಾರಿ ರಾಮಣ್ಣ ಗೌಡ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಪರಿವೀಕ್ಷಕ ಸುಂದರ ಗೌಡ ಸ್ವಾಗತಿಸಿ,ಶಿಕ್ಷಕಿ ಪ್ರವೀಣಾ ರೈ ಕಾರ್ಯಕ್ರಮ ನಿರೂಪಿಸಿದರು.


[0:27 pm, 29/10/2023] Siddik Kumbra: ನವೀನ್ ಭಂಡಾರಿ:

ಕ್ರೀಡಾಳುಗಳಿಗೆ ಸಹಕಾರ ಮಾಡುವ ಮೂಲಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು

LEAVE A REPLY

Please enter your comment!
Please enter your name here