ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 13ನೇ ಪುಣಚ ಶಾಖೆ ಉದ್ಘಾಟನೆ

0

ಬಂಟ್ವಾಳ : ಸಜೀಪಮೂಡ ಗ್ರಾಮದಲ್ಲಿ 1991ರಲ್ಲಿ ಸ್ಥಾಪನೆಗೊಂಡ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘವು 2005 ನ. 18ರಂದು ಬ್ಯಾಂಕಿಂಗ್ ವ್ಯವಹಾರಕ್ಕೆ ಚಾಲನೆ ನೀಡಿದೆ.ಕನಿಷ್ಠ ಅವಧಿಯಲ್ಲಿ 13ನೇ ಶಾಖೆಯನ್ನು ತೆರೆಯುವ ಮೂಲಕ ಗರಿಷ್ಠ ಸಾಧನೆಯನ್ನು ಮಾಡಿದೆ.ಪುಣಚ ಗ್ರಾಮದ ಪರಿಯಲ್ತಡ್ಕ ಪ್ರಗತಿ ಕಾಂಪ್ಲೆಕ್ಸ್‌ನಲ್ಲಿ ನ.5ರಂದು ಬೆಳಗ್ಗೆ 11 ಗಂಟೆಗೆ ಸಹಕಾರಿಯ ನೂತನ ಪುಣಚ ಶಾಖೆ ಉದ್ಘಾಟನೆಗೊಂಡಿತು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಶಾಖೆಯನ್ನು ಉದ್ಘಾಟಿಸಿದರು, ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಅನೇಕ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here