ಕೆಮ್ಮಾರ ಶಾಲೆಗೆ ನಿವೃತ ಯೋಧ ಜಯಕುಮಾರ್‌ರಿಂದ ಫೈಬರ್ ಕುರ್ಚಿ ಕೊಡುಗೆ

0

ಉಪ್ಪಿನಂಗಡಿ: ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಅತ್ಯವಶ್ಯಕವಾದ ಫೈಬರ್ ಕುರ್ಚಿಗಳನ್ನು ನಿವೃತ್ತ ಯೋಧ ಜಯಕುಮಾರ್ ಇಳಂತಿಲ ಅವರು ಉಚಿತವಾಗಿ ನೀಡಿದರು.
ಜಯಕುಮಾರ್ ಇಳಂತಿಲರವರು 15ಕ್ಕೂ ಹೆಚ್ಚು ಸರಕಾರಿ ಶಾಲೆಗಳಿಗೆ ಬೇರೆ ಬೇರೆ ರೀತಿಯ ಕೊಡುಗೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ, ಧನಸಹಾಯವನ್ನು ನೀಡುತ್ತಿದ್ದಾರೆ. ದೇಶ ಸೇವೆಯಿಂದ ನಿವೃತ್ತಿ ಹೊಂದಿದ ಬಳಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಕೆಮ್ಮಾರ ಶಾಲೆಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಅಝೀಝ್ ಬಿ.ಕೆ. ಹಾಗೂ ಮುಖ್ಯೊಪಾಧ್ಯಾಯಿನಿ ಜಯಶ್ರಿ ಎಮ್.ರವರು ಕೊಡುಗೆ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ತೇಜಾವತಿ, ಸದಸ್ಯರಾದ ಪದ್ಮನಾಭ ಶೆಟ್ಟಿ, ಅಬ್ಬಾಸ್, ದೈಹಿಕ ಶಿಕ್ಷಣ ಶಿಕ್ಷಕಿ ಮೋಹನಾಂಗಿ, ಶಿಕ್ಷಕರಾದ ವೆಂಕಟರಮಣ ಭಟ್, ಮೆಹನಾಝ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here