ಸಿರಿಬಾಗಿಲು ಪ್ರದೇಶದಲ್ಲಿ ನಿರಂತರ ಆನೆ ದಾಳಿ-ಪರಿಹಾರಕ್ಕೆ ಆಗ್ರಹ

0

ಕಡಬ : ತಾಲೂಕಿನ ಸಿರಿಬಾಗಿಲು ಗ್ರಾಮದ ರೆಂಜಾಳ,ಪೆರ್ಜೆಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಆನೆ ದಾಳಿಯಿಂದ ಕೃಷಿ ನಾಶವಾಗುತ್ತಿದೆ.ರೆಂಜಾಳ ಶೂರಪ್ಪ ಗೌಡ ಮತ್ತು ಉಮೇಶ ಗೌಡ ಇವರ ತೋಟದಲ್ಲಿ ಫಸಲು ನೀಡುತ್ತಿರುವ ತೆಂಗು ,ಬಾಳೆ,ಹಾಗೂ ಅಡಿಕೆ ಮರಗಳನ್ನು ಶುಕ್ರವಾರ ರಾತ್ರಿ ನಾಶಮಾಡಿದೆ.ನೀರಾವರಿಗೆ ಬಳಸುತ್ತಿದ್ದ ಪರಿಕರಗಳನ್ನು ಪುಡಿಗಟ್ಟಿದೆ. ಈ ಭಾಗದಲ್ಲಿ ಅಗ್ಗಾಗ್ಗೆ ಕಾಡಾನೆ ದಾಳಿಯಾಗುತ್ತಿದ್ದು ರೈತರು ಕಂಗಾಲಾಗಿದ್ದಾರೆ.ಕಾಡನೆ ದಾಳಿ ತಡೆಗೆ ಸೂಕ್ತ ಕ್ರಮ ಕೈಗೊಂಡು ನಾಶವಾದ ಬೆಳೆಗೆ ಪರಿಹಾರ ನೀಡಬೇಕಾಗಿ ಸಂತ್ರಸ್ಥರು ಅಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here