ಕತ್ತಿ, ದೊಣ್ಣೆ ಹಿಡಿದು ಭಾಯ್‌ಗಳಾಗೋದು ಬೇಡ, ಸಮಾಜಮುಖಿ ಕೆಲಸ ಮಾಡಿ ಭಾಯ್‌ಗಳಾಗಿ- ಯುವಕರಿಗೆ ಶಾಸಕ ಅಶೋಕ್ ಕುಮಾರ್ ರೈ ಸಲಹೆ

0

ಪುತ್ತೂರುೆÊಯಲ್ಲಿ ಕತ್ತಿ,ದೊಣ್ಣೆ ಹಿಡಿದು ಭಾಯ್‌ಗಳಾಗೋದು ಬೇಡ.ಸಮಾಜಮುಖಿಯಾಗಿ ಕೆಲಸ ಮಾಡಿ ಅಭಿವೃದ್ಧಿ ಹೊಂದುವುದರ ಮೂಲಕ ಭಾಯ್‌ಗಳಾಗಿ ಎಂದು ಶಾಸಕ ಅಶೋಕ್ ಕುಮಾರ್ ರೈ ಯುವಕರಿಗೆ ಕರೆ ನೀಡಿದ್ದಾರೆ.

ಕೈಕಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕರು, ಯುವಕರು ಈ ಸಮಾಜದ ಶಕ್ತಿ.ಆದರೆ ಈಗ ಕೆಲವು ಯುವಕರಿಗೆ ಕೈಯಲ್ಲಿ ಕತ್ತಿ, ದೊಣ್ಣೆ ಹಿಡಿದರೆ ನಾವು ಭಾಯ್‌ಗಳಾಗುತ್ತೇವೆ ಎಂಬ ಸಣ್ಣ ಆಲೋಚನೆ ಮನಸ್ಸಿನಲ್ಲಿದೆ.ಆದರೆ ಈ ರೀತಿ ಭಾಯ್‌ಗಳಾಗುವ ಬದಲು ನೀವು ಸಮಾಜಸೇವೆ, ಸಮಾಜಮುಖಿಯಾಗಿ ಕೆಲಸ ಮಾಡಿ ಸ್ವಂತ ಅಭಿವೃದ್ಧಿ ಹೊಂದುವ ಮೂಲಕ ಭಾಯ್‌ಗಳಾಗಿ ಎಂದು ಸಲಹೆ ನೀಡಿದರಲ್ಲದೆ, ಪಕ್ಷ,ಸಂಘಟನೆ ಬೇರೆಬೇರೆಯಾಗಿದ್ದರೂ ಅಭಿವೃದ್ಧಿ, ಸಮಾಜಸೇವೆ ವಿಚಾರ ಬಂದಾಗ ನಾವೆಲ್ಲರೂ ಒಂದೇ ಕೋಣೆಯೊಳಗೆ ನಿಂತು ಕೆಲಸ ಮಾಡುವ ಮನೋಭಾವ ಅಗತ್ಯ ಎಂದರಲ್ಲದೆ, ಈ ರೀತಿ ಸಂಘಟನೆಗಳು ಕೆಲಸ ಮಾಡಬೇಕು ಎಂದು ಹೇಳಿದರು.ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here