ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಸಮಿತಿಗೆ ಆಯ್ಕೆ

0

ಅಧ್ಯಕ್ಷ ಕೃಷ್ಣಪ್ಪ ಕೆ.,ಕಾರ್ಯದರ್ಶಿ ಉಮೇಶ್ ಎಸ್.ಕೆ

ಪುತ್ತೂರು:ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ 2024ರ ಜನವರಿ 25ರಿಂದ 27ರ ತನಕ ನಡೆಯಲಿರುವ ವಾರ್ಷಿಕ ಜಾತ್ರೋತ್ಸವ- ‘ಸಂಪ್ಯ ಜಾತ್ರೆ’ಯ ಅಧ್ಯಕ್ಷರಾಗಿ ನಿವೃತ್ತ ಉಪ ವಲಯಾರಣ್ಯಾಧಿಕಾರಿ ಕೆ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಎಸ್.ಕೆ ಸಂಪ್ಯ, ಗೌರವಾಧ್ಯಕ್ಷರಾಗಿ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಕೋಶಾಧಿಕಾರಿಯಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯರವರು ಆಯ್ಕೆಯಾಗಿದ್ದಾರೆ.


ದೇವಸ್ಥಾನದಲ್ಲಿ ನ.13ರಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ. ಸುರೇಶ ಪುತ್ತೂರಾಯ ಇವರ ಅಧ್ಯಕ್ಷತೆಯಲ್ಲಿ ನಡೆದ ಜಾತ್ರೋತ್ಸವದ ಪೂರ್ವಭಾವಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಮಿತಿ ಉಪಾಧ್ಯಕ್ಷರಾಗಿ ಶ್ರೀ ಕೃಷ್ಣ ಭಟ್ ಮುಕ್ರಂಪಾಡಿ ಮತ್ತು ರಮೇಶ್ ಪ್ರಭು ವಿನ್ನರ್, ಜೊತೆ ಕಾರ್ಯದರ್ಶಿಗಳಾಗಿ ಸಂತೋಷ್ ಕೆ. ಮುಕ್ರಂಪಾಡಿ ಮತ್ತು ನಾಗೇಶ ಸಂಪ್ಯ, ಸಹ ಕೋಶಾಧಿಕಾರಿಯಾಗಿ ಉದಯಕುಮಾರ್ ರೈ, ಗೌರವ ಸಲಹೆಗಾರರಾಗಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರು, ರಮಾನಾಥ ಗೌಡ ಬೈಲಾಡಿ, ಭೀಮಯ್ಯ ಭಟ್, ಪ್ರಸನ್ನಕುಮಾರ್ ಮಾರ್ತ, ವಿಜಯ ಬಿ ಎಸ್, ಶೀನಪ್ಪ ನಾಯ್ಕ, ಜಯಂತ ಶೆಟ್ಟಿ ಕಂಬಳತಡ್ಡ, ಶಿವರಾಮ ಆಳ್ವ, ರಮೇಶ್ ರೈ ಮೊಟ್ಟೆತ್ತಡ್ಕ ಇವರನ್ನು ಆಯ್ಕೆ ಮಾಡಲಾಯಿತು.


ಜಾತ್ರೋತ್ಸವಕ್ಕೆ ವಿವಿಧ ಉಪಸಮಿತಿಗಳ ರಚನೆ ಮಾಡಲಾಗಿದ್ದು, ಆಹಾರ ಸಮಿತಿಯ ಸಂಚಾಲಕರಾಗಿ ರಮೇಶ್ ರೈ ಮೊಟ್ಟೆತ್ತಡ್ಕ, ಸುದರ್ಶನ ಭಟ್, ಅಲಂಕಾರ ಸಮಿತಿಯ ಸಂಚಾಲಕರಾಗಿ ಉಮೇಶ ಆಚಾರ್ಯ ಕುಕ್ಕಾಡಿ, ಮೋಹನ ಸಿಂಹವನ, ವೈದಿಕ ಸಮಿತಿಯ ಸಂಚಾಲಕರಾಗಿ ಅರ್ಚಕರಾದ ಮೋಹನ್ ರಾವ್, ಡೆಂಬಳ ಗೋಪಾಲಕೃಷ್ಣ ಭಟ್, ಕಾರ್ಯಾಲಯ ಸಮಿತಿಯ ಸಂಚಾಲಕರಾಗಿ ಶಿವಪ್ಪ ಮೂಲ್ಯ, ತೇಜಸ್ ಸಂಪ್ಯಹೊರೆಕಾಣಿಕೆ ಸಮಿತಿಯ ಸಂಚಾಲಕರಾಗಿ ಉದಯಕುಮಾರ್ ಬಲ್ಲಾಳ್, ಲಕ್ಷ್ಮಣ ಬೈಲಾಡಿ, ಉಪಚಾರ ಸಮಿತಿಯ ಸಂಚಾಲಕರಾಗಿ ವಿನ್ಯಾಸ ಯು.ಎಸ್, ಜಗದೀಶ್ ಎಂ, ಪ್ರವೀಣ್ ಉದಯಗಿರಿ, ಚಪ್ಪರ ಸಮಿತಿಯ ಸಂಚಾಲಕರಾಗಿ ರವಿ ಬೈಲಾಡಿ, ಸುರೇಶ್ ಪೂಜಾರಿ ಸಂಪ್ಯ, ಸ್ವಯಂ ಸೇವಕ ಸಮಿತಿಯ ಸಂಚಾಲಕರಾಗಿ ರಾಜೇಶ್ ರೈ ಸಂಪ್ಯದಮೂಲೆ, ದಿನೇಶ್ ಬಿಗ್ ಬಾಸ್, ಸುರೇಶ್ ಉದಯಗಿರಿ, ಮಹಿಳಾ ಸಮಿತಿಯ ಸಂಚಾಲಕರಾಗಿ ಅರ್ಚನಾ ತೇಜಸ್, ನಿಶಿತಾ ಲಕ್ಷ್ಮಣ್, ಪ್ರಚಾರ ಸಮಿತಿಯ ಸಂಚಾಲಕರಾಗಿ ಯತೀಶ್ ಉಪ್ಪಳಿಗೆ, ನೇಮಾಕ್ಷ ಸುವರ್ಣ ಇವರನ್ನು ನೇಮಿಸಲಾಯಿತು.


ವಾರ್ಷಿಕ ಜಾತ್ರೋತ್ಸವದಲ್ಲಿ ಜ. 25ರಂದು ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಪೂಜೆ, ಜ.26ರಂದು ಗಣಪತಿಹವನ, ಸತ್ಯನಾರಾಯಣ ಪೂಜೆ, ಉತ್ಸವ ಬಲಿ, ಬಟ್ಟಲು ಕಾಣಿಕೆ, ಜ.27ರಂದು ದುರ್ಗಾ ಪೂಜೆ, ಧೂಮಾವತಿ ಮತ್ತು ಗುಳಿಗ ದೈವಗಳ ನೇಮಗಳನ್ನು ಸಂಪ್ರದಾಯದಂತೆ ನಡೆಸುವುದಾಗಿ ತೀರ್ಮಾನಿಸಲಾಯಿತು.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಜಯಕುಮಾರ್ ನಾಯರ್, ಲಕ್ಷ್ಮಣ ಬೈಲಾಡಿ, ಜಗದೀಶ್ ಎಂ, ವಿನ್ಯಾಸ್ ಯು ಎಸ್., ಪ್ರೇಮ, ಶಶಿಕಲಾ, ಮೋಹನ್ ರಾವ್ ಹಾಗೂ ಭಕ್ತಾದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here