ಕಬಕ ಸರಕಾರಿ ಪ್ರೌಢಶಾಲೆಯಲ್ಲಿ ಕಲಾಂ ಜೀವನ ಧರ್ಮ ಮತ್ತು ವಿಷನ್ ಇಂಡಿಯ ವಿಶೇಷ ಉಪನ್ಯಾಸ ಕಾರ್ಯಕ್ರಮ

0

ಪುತ್ತೂರು: ಸರಕಾರಿ ಪ್ರೌಢಶಾಲೆ ಕಬಕದ ಸಾಹಿತ್ಯ ಸಂಘ, ಪ್ರಕೃತಿ ಇಕೋ ಕ್ಲಬ್,ಹಾಗೂ ಅಬ್ಬಕ್ಕ ರಾಣಿ ಗೈಡ್ಸ್ ದಳದ ಆಶ್ರಯದಲ್ಲಿ ಕಲಾಂ ಜೀವನ ಧರ್ಮ ಮತ್ತು ವಿಷನ್ ಇಂಡಿಯ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಜಯಪ್ರಕಾಶ್ ರಾವ್ ಹಿರಿಯ ಸಾಹಿತಿಗಳು ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಡಿ.ಆರ್.ಡಿ.ಓ.ಕೇಂದ್ರ ರಕ್ಷಣೆ ಸಂಶೋಧನಾ ಇಲಾಖೆಯವರು ಸಂಪನ್ಮೂಲ ವ್ಯಕ್ತಿಗಳಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಅತಿಥಿಗಳಾಗಿದ್ದರು. ಮುಖ್ಯ ಶಿಕ್ಷಕಿ ಸುರೇಖಾ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಸುಮಿತ್ರ ಸ್ಮರಣಿಕೆ ನೀಡಿದರು. ಕಾರ್ಯಕ್ರಮದಲ್ಲಿ ಜಯಪ್ರಕಾಶ್ ರಾವ್ ಅವರನ್ನು ಶಾಲಾವತಿಯಿಂದ ಗೌರವಿಸಲಾಯಿತು. ಕನ್ನಡ ಭಾಷಾ ಶಿಕ್ಷಕಿ ಶಾಂತಾ ಪುತ್ತೂರು ಧನ್ಯವಾದವಿತ್ತರು. ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಯ್ಯ.ಕೆ, ಬೋಧಕೇತರ ಸಿಬ್ಬಂದಿ ಶರತ್ ಕುಮಾರ್, ಸಮಾಜ ವಿಜ್ಞಾನ ಶಿಕ್ಷಕಿ ಜಯಶ್ರೀ, ಆಂಗ್ಲ ಭಾಷಾ ಶಿಕ್ಷಕಿ ತುಳಸಿ, ಹಿಂದಿ ಭಾಷಾ ಶಿಕ್ಷಕಿ ಸೌಮ್ಯ, ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ದಿವ್ಯಶ್ರಿ, ಶ್ರುತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here