ಬೆಂಗಳೂರು ಕಂಬಳಕ್ಕೆ ದಂಬೆಕ್ಕಾನ ಸದಾಶಿವ ರೈ, ಕಾವು ಹೇಮನಾಥ ಶೆಟ್ಟಿಯವರ ಕಂಬಳದ ಕೋಣಗಳು

0

ಪುತ್ತೂರು: ಬೆಂಗಳೂರು ಅರಮನೆ ಮೈದಾನದಲ್ಲಿ ನ.25 ಮತ್ತು 26 ರಂದು ನಡೆಯಲಿರುವ ಬೆಂಗಳೂರು ನಮ್ಮ ಕಂಬಳ ಕೂಟಕ್ಕೆ ಪುತ್ತೂರಿನಿಂದ ಅನಿಲೆ ತರವಾಡು ಮನೆ ದಂಬೆಕ್ಕಾನ ಸದಾಶಿವ ರೈ ಮತ್ತು ಬನ್ನೂರುಗುತ್ತು ಕಾವು ಹೇಮನಾಥ ಶೆಟ್ಟಿಯವರ ಕಂಬಳದ ಕೋಣಗಳು ನ.23 ರಂದು ಉಪ್ಪಿನಂಗಡಿಯಿಂದ ಹೊರಟವು. ಅನಿಲೆ ತರವಾಡು ಮನೆ ದಂಬೆಕ್ಕಾನ ಸದಾಶಿವ ರೈಗಳ ಕೋಟಿ ಚೆನ್ನಯ ಹೆಸರಿನ ಕಂಬಳದ ಕೋಣಗಳನ್ನು ಪಡುಮಲೆ ಗ್ರಾಮದ ಅನಿಲೆ ತರವಾಡು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಕರೆದೊಯ್ಯಲಾಯಿತು.

ಈ ಸಂದರ್ಭದಲ್ಲಿ ಕಾವು ಹೇಮನಾಥ ಶೆಟ್ಟಿ, ಕಾವು ದಿವ್ಯನಾಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ಅನಿಲೆ ಜಯರಾಜ್ ಶೆಟ್ಟಿ ಹಾಗೂ ಕೋಣಗಳನ್ನು ನೋಡಿಕೊಳ್ಳುವವರು ಉಪಸ್ಥಿತರಿದ್ದರು. ಉಪ್ಪಿನಂಗಡಿಯಲ್ಲಿ ಕಾವು ಹೇಮನಾಥ ಶೆಟ್ಟಿಯವರ ಕಂಬಳದ ಕೋಣಗಳ ಜೊತೆ ಸೇರಿ ಸೇರಿ ಅಲ್ಲಿಂದ ಬೆಂಗಳೂರಿಗೆ ಹೊರಡಲಾಯಿತು.

LEAVE A REPLY

Please enter your comment!
Please enter your name here