ಸರ್ವೆ ಎಸ್ ಜಿ ಎಂ ಪ್ರೌಢ ಶಾಲೆಯ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ

0

ಸರ್ವೆ : ಸರ್ವೆಯ ಎಸ್ ಜಿ ಎಂ ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನ.27ರಂದು ಜರುಗಿತು . ಮುಖ್ಯ ಅತಿಥಿಗಳಾಗಿ ಎನ್ ಎಸ್ ಡಿ ಗ್ರಾಮ ಪಂಚಾಯತ್ ಅಧ್ಯಕ್ಷ  ಚಂದ್ರಶೇಖರ್, ಮುಂಡೂರು ಗ್ರಾಮ ಪಂಚಯಾತ್ ಸದಸ್ಯರಾದ ಕಮಲೇಶ್ ಎಸ್ ವಿ , ಪ್ರೇಮ , ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಅಶೋಕ್ ಎಸ್ ಡಿ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಎಸ್ ಡಿ ಹಾಗೂ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಇಂದುಶೇಖರ್ ಪಿ ಬಿ ಉಪಸ್ಥಿತರಿದ್ದರು

ಶಾಲಾ ವಾರ್ಷಿಕ ವರದಿ ವಾಚನವನ್ನು ಪ್ರಭಾರ ಮುಖ್ಯ ಗುರು ಮೋಹನ್ ಕುಮಾರ್ ಎನ್ ವಾಚಿಸಿದರು. ಮುಖ್ಯೋಪಾಧ್ಯಯರು ಜಯರಾಮ ಶೆಟ್ಟಿ ದಿಕ್ಸೂಸಿ ಭಾಷಣಗೈದರು . ನೂಜಿ ವೆಂಕಟ್ರಮಣ ಗೌಡರ ಸ್ಮರಣಾರ್ಥ ಹಿರಿಯ ವಿದ್ಯಾರ್ಥಿಗಳಾದ ಉದಯಚಂದ್ರ ಕರಂಬಾರು, ಗೌತಮ್ ರಾಜ್ ಕರಂಬಾರು ಹಾಗೂ ಮೋಹನ್ ಕುಮಾರ್ ಪಿ , ರಾಜ್ಯಮಟ್ಟದ ಯೋಗ ಸ್ಪರ್ಥೆಯಲ್ಲಿ ವಿಜೇತಳಾದ ವಿದ್ಯಾರ್ಥಿನಿ ಕೃಪಾ ಕೆ ಸನ್ಮಾನ ನೆರವೇರಿಸಲಾಯಿತು.

ಶಾಲಾ ಸಂಚಾಲಕ ಡಾ. ಯಾದವಿ ಜಯಕುಮಾರ್ ಸ್ವಾಗತಿಸಿ, ಶಿಕ್ಷಕಿ ಸುಜಾತ ವಂದಿಸಿ,ಅಕ್ಷತಾ ಹೆಚ್ ಎಲ್ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.

LEAVE A REPLY

Please enter your comment!
Please enter your name here