ಉಪ್ಪಿನಂಗಡಿ: ಬಿಜೆಪಿಗೆ ಗೆಲುವು- ವಿಜಯೋತ್ಸವ

0

ಉಪ್ಪಿನಂಗಡಿ: ಪಂಚ ರಾಜ್ಯ ಚುನಾವಣೆಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿಯು ಸ್ಪಷ್ಟ ಬಹುಮತವನ್ನು ಪಡೆದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಉಪ್ಪಿನಂಗಡಿಯಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.


ಈ ಸಂಧರ್ಭದಲ್ಲಿ ಮಾತನಾಡಿದ ಬಿಜೆಪಿ ಮುಂದಾಳು ಸುರೇಶ್ ಅತ್ರಮಜಲು, ಬಿಟ್ಟಿ ಭಾಗ್ಯಗಳನ್ನು ಮುಂದಿರಿಸಿ ನಕಲಿ ಗ್ಯಾರಂಟಿಯ ಮೂಲಕ ಜನತೆಯನ್ನು ಮರಳು ಮಾಡುತ್ತಿರುವ ಕಾಂಗ್ರೆಸ್ ದೇಶವನ್ನು ಅಭಿವೃದ್ಧಿ ಪಥದಿಂದ ವಿಮುಖಗೊಳಿಸಲು ಯತ್ನಿಸುತ್ತಿದೆ. ಇದನ್ನು ಮತದಾರರು ಅರಿತಿದ್ದು, ಮೂರು ಬೃಹತ್ ರಾಜ್ಯಗಳಲ್ಲಿ ಕಾಂಗ್ರೆಸ್ ಅನ್ನು ತಿರಸ್ಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರ ರಕ್ಷಣೆಯ ನೈಜ ಗ್ಯಾರಂಟಿಗೆ ಬೆಂಬಲ ನೀಡಿದ್ದಾರೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಮತ್ತೆ ಜಯಿಸುವ ಪೂರ್ವ ಸೂಚನೆ ಲಭಿಸಿದೆ ಎಂದರು.


ವಿಜಯೋತ್ಸವದಲ್ಲಿ ಬಿಜೆಪಿ ಮುಖಂಡರಾದ ಎನ್. ಉಮೇಶ್ ಶೆಣೈ, ಸುನಿಲ್ ಕುಮಾರ್ ದಡ್ಡು, ಮುಕುಂದ ಗೌಡ ಬಜತ್ತೂರು, ಪುರುಷೋತ್ತಮ ಮುಂಗ್ಲಿಮನೆ, ಸುದರ್ಶನ್, ನವೀನ್ ಪದೆಬರಿ, ಕೇಶವ ಸುಣ್ಣಾನ , ಗೋಪಾಲ ಸಪಲ್ಯ, ಚಂದ್ರಶೇಖರ್ ಮಡಿವಾಳ, ಹರೀಶ್ ನೆಕ್ಕಿಲಾಡಿ, ಉಷಾ ಮುಳಿಯ, ಸುಜಾತ ರೈ, ಗೀತಾ, ಸದಾನಂದ ಪೂಜಾರಿ, ಆದೇಶ್ ಶೆಟ್ಟಿ, ದಯಾನಂದ ಸರೋಳಿ, ನಿತಿನ್ ತಾರಿಪಡ್ಪು, ಸುರೇಶ್ ಕುಲಾಲ್ ಕೋಡಿ, ಸುರೇಶ್ ನೂಜೆ, ಅಕ್ಷಯ್ ಕುಮಾರ್ ಅಗರ್ತ ಬೈಲು, ಕೇಶವ ಪದಬರಿ, ರಮೇಶ್ ನಾಯ್ಕ ತೋಟ, ಜಯಂತ ಪೊರೋಳಿ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here