ಇರ್ದೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

0

ಅಧ್ಯಕ್ಷ ಶುಭಕರ ರೈ, ಉಪಾಧ್ಯಕ್ಷ ದಿನೇಶ್ ಕುಮಾರ್ ರೈ ಅವಿರೋಧವಾಗಿ ಪುನರಾಯ್ಕೆ

ಪುತ್ತೂರು: ಇರ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಯ ನೂತನ ಅಧ್ಯಕ್ಷರಾಗಿ ಶುಭಕರ ರೈ ಬಿ. ಹಾಗೂ ಉಪಾಧ್ಯಕ್ಷರಾಗಿ ದಿನೇಶ್ ಕುಮಾರ್ ರೈ ಬಿ. ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.


ಒಟ್ಟು13 ನಿರ್ದೆಶಕ ಸ್ಥಾನಗಳನ್ನು ಒಳಗೊಂಡಿರುವ ಸಂಘದಲ್ಲಿ ಸಾಮಾನ್ಯ ಸ್ಥಾನದಲ್ಲಿ ಚಂದ್ರಶೇಖರ ರೈ ಬಾಲ್ಯೊಟ್ಟು, ದಿನೇಶ್ ಕುಮಾರ್ ರೈ ಬಿ.ಬಾಳೆಹಿತ್ಲು, ಶುಭಕರ ರೈ ನಿರ್ದೇಶಕರಾಗಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಆನಂದ ಅರಂಬ್ಯ, ಸುಧಾಕರ ರೈ ಬಿ ಬಾಳೆಹಿತ್ಲು, ಪುಷ್ಪರಾಜ ಶೆಟ್ಟಿ ಎಸ್.ಬೈಲಾಡಿ, ಸದಾನಂದ ರೈ ಚೆಲ್ಯಡ್ಕ ನೂತನವಾಗಿ ಆಯ್ಕೆಯಾಗಿದ್ದಾರೆ. ಮಹಿಳಾ ಮೀಸಲು ಸ್ಥಾನದಿಂದ ಅಜಿತಾ ಶಂಕರಿ ನಡುವಡ್ಕ ಮತ್ತು ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ರಾಮಣ್ಣ ಪೂಜಾರಿ ಐ ಇರ್ದೆ ಪುನರಾಯ್ಕೆಯಾಗಿದ್ದಾರೆ. ಮಹಿಳಾ ಮೀಸಲು ಸ್ಥಾನದಿಂದ ಸರೋಜ ಎಂ ಮೇರ್ವೆ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ರವೀಂದ್ರ ಶೆಟ್ಟಿ ಕೆ. ಬಾಜುವಳ್ಳಿ, ಅನುಸೂಚಿತ ಪಂಗಡದಿಂದ ವೆಂಕಪ್ಪ ನಾಯ್ಕ ಎಂದು ನೂತನವಾಗಿ ಆಯ್ಕೆಯಾಗಿದ್ದಾರೆ. ಅನು ಸೂಚಿತ ಪಂಗಡದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ.


ಡಿ.12 ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಶುಭಕರ ರೈಯವರನ್ನು ಅಜಿತಾ ಶಂಕರಿ ಸೂಚಿಸಿ, ಸದಾನಂದ ರೈ ಅನುಮೋದಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ದಿನೇಶ್ ಕುಮಾರ್ ರೈಯವರನ್ನು ರವೀಂದ್ರ ಶೆಟ್ಟಿ ಸೂಚಿಸಿ, ಸರೋಜ ಅನುಮೋದಿಸಿದ್ದರು. ನಿರ್ದೇಶಕರಾದ ಆನಂದ, ಚಂದ್ರಶೇಖರ ರೈ, ಸುಧಾಕರ ರೈ, ಪುಷ್ಪರಾಜ ಶೆಟ್ಟಿ, ರಾಮಣ್ಣ ಪೂಜಾರಿ ಹಾಗೂ ವೆಂಕಪ್ಪ ನಾಯ್ಕ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಸಹಕಾರ ಇಲಾಖೆಯ ಮಂಗಳೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಕಚೇರಿಯ ಅಧೀಕ್ಷಕ ಬಿ.ನಾಗೇಂದ್ರ ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯದರ್ಶಿ ರಾಜಾರಾಮ ಭಟ್ ಹಾಗೂ ಹಾಲು ಪರೀಕ್ಷಕ ಹಮೀದ್ ಸಹಕರಿಸಿದ್ದರು.

LEAVE A REPLY

Please enter your comment!
Please enter your name here