ನಗರಸಭೆ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ವೇಗ ಕೊಡುವಂತೆ ನಗರಸಭೆ ಬಿಜೆಪಿ ಸದಸ್ಯರಿಂದ ಪೌರಾಯುಕ್ತರಿಗೆ ಮನವಿ

0

ಪುತ್ತೂರು: ನಗರಸಭೆ ವಾರ್ಡ್ ಗಳಲ್ಲಿ ಹಲವು ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದೆ. ಅದಕ್ಕೆ ವೇಗ ಕೊಡುವಂತೆ ನಗರಸಭೆ ಬಿಜೆಪಿ ಸದಸ್ಯರು ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಿದ್ದಾರೆ.


ನಾವು ಪುತ್ತೂರು ನಗರಸಭೆಯ ವಿವಿಧ ವಾರ್ಡ್ ಗಳ ಜನಪ್ರತಿನಿಧಿಗಳಾಗಿದ್ದು, ನಮ್ಮ ವಾರ್ಡ್ ಗಳ ವ್ಯಾಪ್ತಿಯಲ್ಲಿ ಈಗಾಗಲೇ ಆಮೆಗತಿಯಲ್ಲಿ ಆರಂಭಗೊಂಡಿರುವ ರಸ್ತೆ ಬದಿಯ ಗಿಡಗಂಟಿ ತೆರವುಗೊಳಿಸುವ ಕಾಮಗಾರಿಯು ಅಸಮರ್ಪಕವಾಗಿ ನಡೆಯುತ್ತಿದ್ದು ಇದರಿಂದಾಗಿ ಸಾರ್ವಜನಿಕರಿಗೆ, ವಾಹನಗಳ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ. ಅಲ್ಲದೆ ಅಮೃತ ನಗರೋತ್ಥಾನ ಯೋಜನೆಯ ಕಾಮಗಾರಿಗಳೂ ವೇಗ ಹಾಗೂ ಗುಣಮಟ್ಟವನ್ನು ಕಳಕೊಳ್ಳುತ್ತಿದೆ. ಜಲಸಿರಿ ಯೋಜನೆ ಇತ್ಯಾದಿಗಳಿಂದ ರಸ್ತೆಗಳಲ್ಲಿ ಹೊಂಡ ಗುಂಡಿಗಳು ಉಂಟಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಈ ಎಲ್ಲಾ ವಿಚಾರಗಳ ಬಗ್ಗೆ ತಮ್ಮ ವತಿಯಿಂದ ತಕ್ಷಣ ತಾಂತ್ರಿಕವಾಗಿ ಪರಿಶೀಲಿಸಿ ಕಾಮಗಾರಿಗಳನ್ನು ವೇಗ ಹಾಗೂ ಗುಣಮಟ್ಟದೊಂದಿಗೆ ಸಕಾಲದಲ್ಲಿ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ ಜೀವಂಧರ್ ಜೈನ್, ಸದಸ್ಯರಾದ ಪಿ ಜಿ ಜಗನ್ನಿವಾಸ ರಾವ್, ಭಾಮಿ ಅಶೋಕ್ ಶೆಣೈ, ಮೋಹಿನಿ ವಿಶ್ವನಾಥ ಗೌಡ, ಗೌರಿ ಬನ್ನೂರು, ನವೀನ್ ಪೆರಿಯತ್ತೋಡಿ, ಪ್ರೆಮ್, ಪ್ರೇಮಲತಾ ನಂದಿಲ, ಪೂರ್ಣಿಮಾ, ಇಂದಿರಾ ಆಚಾರ್ಯ, ಶೀನಪ್ಪ ನಾಯ್ಕ್, ಲೀಲಾವತಿ ಅವರು ಮನವಿ ನೀಡುದರು.

LEAVE A REPLY

Please enter your comment!
Please enter your name here