ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಪಡ್ನೂರು ಗ್ರಾಮದ ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜ.7 ರಿಂದ 9ರ ತನಕ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯು ಡಿ.14ರಂದು ಬಿಡುಗಡೆಗೊಂಡಿತು.

ದೇವರಿಗೆ ಪೂಜೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟರಮಣ ಭಟ್ ಆಮಂತ್ರಣ ಬಿಡುಗಡೆಗೊಳಿಸಿದರು. ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಬಾಲಕೃಷ್ಣ ಜೋಯಿಸ ಯರ್ಮುಂಜ, ಚೈತ್ರನಾರಾಯಣ ಸೇಡಿಯಾಪು, ಯಶೋಧರ ಕುಂಜಾರು, ಮಧುಸೂದನ ಪಡ್ಡಾಯೂರು, ಜಯಂತಿ ಪಳ್ಳ, ದೇವಸ್ಥಾನದ ಅರ್ಚಕ ಶ್ರೀಕಾಂತ್ ಭಟ್, ವಿಜಯನಾರಾಯಣ ಕುಂಬಾಡಿ, ರಾಧಾಕೃಷ್ಣ ಕುಂಜಾರು, ಶ್ರೀಧರ ಕುಂಜಾರು, ರಾಜೇಶ್ ಬೇರಿಕೆ, ಬಾಲಕೃಷ್ಣ ಗೌಡ ಮುವಪ್ಪು, ಸುದರ್ಶನ್ ರಾಮನಗರ, ರಮೇಶ್ ರೆಂಜಾಳ, ಗಿರಿಧರ ಪಂಜಿಗುಡ್ಡೆ, ಶಿವರಾಮ ದೇಂತಡ್ಕ, ಸತ್ಯನಾರಾಯಣ ರಾವ್ ಕುಂಜಾರು, ಶಿಶಿರ್ ಪೆರ್ವೊಡಿ, ಶ್ರೀಧರ ಪಂಜಿಗುಡ್ಡೆ, ರಮಣಿ ಡಿ ಗಾಣಿಗ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here