ಪರಿಸರ ಜಾಗೃತಿಗಾಗಿ ಸೈಕಲ್ ತುಳಿದ ಉತ್ತರ ಪ್ರದೇಶದ ರೋಬಿನ್ ಸಿಂಗ್‌ಗೆ ಪುತ್ತೂರು ಪಂಚವಟಿಯಲ್ಲಿ ಸ್ವಾಗತ

0

ಪುತ್ತೂರು: ಸೈಕಲ್ ಬಳಕೆಯ ಅಗತ್ಯ, ಪರಿಸರ ಜಾಗೃತಿಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡುಸುವ ನಿಟ್ಟಿನಲ್ಲಿ ಉತ್ತರಪ್ರದೇಶದಿಂದ ಸೈಕಲ್ ಯಾತ್ರೆಯಲ್ಲಿ ದೇಶ ಪರ್ಯಟನೆ ಮಾಡುತ್ತಿರುವ ರೋಬಿನ್ ಸಿಂಗ್ ಎಂಬವರು ಡಿ.15 ರಂದು ಪುತ್ತೂರಿಗೆ ಬಂದು ಪಂಚವಟಿಗೆ ಆಗಮಿಸಿ ವಿಶ್ರಾಂತಿ ಪಡೆದು ಅಲ್ಲಿ ಆತಿಥ್ಯ ಸ್ವೀಕರಿಸಿ ಮತ್ತೆ ದೇಶ ಪರ್ಯಟನೆ ಕೈಗೊಂಡರು.

ಉತ್ತರ ಪ್ರದೇಶದಿಂದ ಹೊರಟು ದೇಶಾದ್ಯಂತ ಸುತ್ತಾಡಿ ಪುತ್ತೂರಿಗೆ ಬಂದಿದ್ದೇನೆ. ಪರಿಸರ ಜಾಗೃತಿಗಾಗಿ ಹಾಕಿಕೊಂಡ ಕಾರ್ಯಕ್ರಮದಲ್ಲಿ ಇವತ್ತು ಪುತ್ತೂರಿನಿಂದ ಸುಳ್ಯ, ಮಡಿಕೇರಿ, ಮೈಸೂರು ಆಗಿ ಮುಂದೆ ಮಧ್ಯಪ್ರದೇಶದ ಬೋಪಾಲ್‌ನಲ್ಲಿ ಅಭಿಯಾನಕ್ಕೆ ಕೊನೆ ನೀಡಲಿದ್ದೇನೆ ಎಂದು ಅವರು ಮಾಹಿತಿ ನೀಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮವಿಕಾಸನಿ ಪ್ರಚಾರಕರ್ ಪ್ರಶಾಂತ್, ರಮೇಶ್ ಪರಿಸರ ಜಾಗೃತಿಗೆ ಪ್ರೋತ್ಸಾಹ ನೀಡಿದರು.

LEAVE A REPLY

Please enter your comment!
Please enter your name here