ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ – ಸಹಕಾರ ಭಾರತಿ ಅಭ್ಯರ್ಥಿಗಳ ಪರ ಮತಯಾಚನೆ

0

ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ಡಿ.17ರಂದು ನಡೆಯಲಿದ್ದು, ಸಹಕಾರ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಕಾಣಿಯೂರು, ದೋಳ್ಪಾಡಿ, ಚಾರ್ವಾಕ, ಪುಣ್ಚತ್ತಾರು, ನಾಣಿಲ ವಿವಿಧ ಕಡೆಗಳಲ್ಲಿ ನಡೆಸಲಾಯಿತು. ಅಭ್ಯರ್ಥಿಗಳಾದ ಗಣೇಶ್ ಉದನಡ್ಕ, ಸುಂದರ ದೇವಸ್ಯ, ವಿಶ್ವನಾಥ ದೇವಿನಗರ, ಅನಂತ್ ಕುಮಾರ್ ಬೈಲಂಗಡಿ, ಪರಮೇಶ್ವರ ಅನಿಲ, ದಿವಾಕರ ಮರಕ್ಕಡ, ರಮೇಶ್ ಉಪ್ಪಡ್ಕ, ವೀಣಾ ಅಂಬುಲ, ರತ್ನಾವತಿ ಮುದುವ, ಬಾಲಕೃಷ್ಣ ಗೌಡ ಇಡ್ಯಡ್ಕ, ಲೋಕೇಶ್ ಆತಾಜೆ, ಶೀಲಾವತಿ ಮುಗರಂಜ, ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯ ವಿಶ್ವನಾಥ ಕೊಪ್ಪ, ಉಪಾಧ್ಯಕ್ಷ ಗಂಗಮ್ಮ ಗುಜ್ಜರ್ಮೆ ಮತ್ತು ಸದಸ್ಯರು, ಸುಳ್ಯ ಬಿಜೆಪಿ ಮಂಡಲ ಸಮಿತಿ ಸದಸ್ಯ ಶಿವರಾಮ ರೈ ಪಿಜಕ್ಕಳ, ಸಹಕಾರ ಭಾರತಿ ಪ್ರಕೋಷ್ಠದ ಸಹ ಸಂಚಾಲಕ ಧರ್ಮೇಂದ್ರ ಕಟ್ಟತ್ತಾರು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಉಪಾಧ್ಯಕ್ಷ ಮುರಳೀಧರ ಪುಣ್ಚತ್ತಾರು ಹಾಗೂ ನಿರ್ದೇಶಕರು, ಕಾಣಿಯೂರು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಧನಂಜಯ ಕೇನಾಜೆ, ಸಹ ಸಂಚಾಲಕ ಸುರೇಶ್ ಓಡಬಾಯಿ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಸುಂದರ ಬೆದ್ರಾಜೆ, ಬಾಲಕೃಷ್ಣ ಇಡ್ಯಡ್ಕ, ವೀರಪ್ಪ ಉದ್ಲಡ್ಡ, ವಿಶ್ವನಾಥ ದೇವಿನಗರ, ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆನಂದ ಬನೇರಿ, ಲಕ್ಷ್ಮಣ ಗೌಡ ಮುಗರಂಜ, ಬೆಳಿಯಪ್ಪ ಗೌಡ ದೇವರತ್ತಿಮಾರು ಮತ್ತಿತರರು ಪಾಲ್ಗೊಂಡರು.

LEAVE A REPLY

Please enter your comment!
Please enter your name here