ಅದ್ಭುತವಾಗಿ ಮಾತನಾಡಬಲ್ಲವ ದೇಶದ ಪ್ರಧಾನಿಯಾಗಬಹುದು – ಅಂಬಿಕಾ ವಿದ್ಯಾಲಯದ ದಶಾಂಬಿಕೋತ್ಸವದಲ್ಲಿ ಡಾ .ರಾಮಚಂದ್ರ ಗುರೂಜಿ

0

ಪುತ್ತೂರು: ಅದ್ಭುತವಾಗಿ ಮಾತನಾಡ ಬಲ್ಲವರಾದರೆ ದೇಶದ ಪ್ರಧಾನಿಯಾಗಬಹುದು. ಮತ್ತು ಸರ್ವ ಲೋಕವನ್ನು ಗೆಲ್ಲಬಹುದು. ಉದಾಹರಣೆ ದೇಶದ ಪ್ರಧಾನಿ ನರೇಂದ್ರ ಮೋದಿಯೇ ನಮ್ಮ ಮುಂದಿದ್ದಾರೆ ಎಂದು ಖ್ಯಾತ ಸಂಮೋಹಿನಿ ತಜ್ಞ, ಕುಂಡಲಿನಿ ಯೋಗ ಗುರು, ಬೆಂಗಳೂರಿನ ಡಾ.ರಾಮಚಂದ್ರ ಗುರೂಜಿ ಅವರು ಹೇಳಿದರು.


ದಶಾಂಬಿಕೋತ್ಸವದ ಸಂಭ್ರಮದಲ್ಲಿರುವ ಬಪ್ಪಳಿಗೆ ಅಂಬಿಕಾ ಬಾಲವಿದ್ಯಾಲಯದಲ್ಲಿ ಡಿ.16ರಂದು ಅವರು ಅಂತರ್ಮನಸ್ಸಿನ ವಿಸ್ಮಯ ಶಕ್ತಿಗಳ ಕುರಿತು ವಿಶೇಷ ಮಾಹಿತಿ ನೀಡಿದರು. ಮಕ್ಕಳಿಗೆ ವಾಕ್ ಚಾತುರ್ಯ ಕೊಡಿ, ಯಾಕೆಂದರೆ ತುಂಬಾ ಬುದ್ದಿವಂತರಿಗೆ ಮಾತನಾಡಲು ಬರುವುದಿಲ್ಲ. ಯಾರಿಗೆ ಮಾತನಾಡಲು ಬರುತ್ತದೆಯೋ ಆತ ಸರ್ವ ಲೋಕ ಗೆಲ್ಲುತ್ತಾನೆ. ಮಕ್ಕಳಿಗೆ ಆತ್ಮ ರಕ್ಷಾ ಕಲೆ ಹೇಳಿ ಕೊಡಿ.ಮುಂದಿನ ಪರಿಸ್ಥಿತಿ ಈಗಿರುವ ಹಾಗೆ ಇರುವುದಿಲ್ಲ
ಇಸ್ರೇಲ್, ಜಪಾನ್, ಯು ಕೆ ಯಲ್ಲಿ ಕಡ್ಡಾಯವಾಗಿ 2 ವರ್ಷ ದೇಶ ಸೆವೆ ಮಾಡಬೇಕು. ಹಾಗಾಗಿ ಮಕ್ಕಳಿಗೆ ದೇಶ ಪ್ರೆಮ ಕಳಿಸಿ. ಶಿಸ್ತು ಸಂಭ್ರಮ ಅವರಲ್ಕಿ ಬರುತ್ತದೆ.
ದೇಶ ಸುತ್ತು ಕೋಶ ಓದು ಎಂದು ಹೇಳುತ್ತಾರೆ ಎಂದ ಅವರು ಮಕ್ಕಳ ಪಾಲನ ಪೋಷಣ ಹೇಗೆ ಮಾಡಬಹುದು ಎಂಬ ಕುರಿತು ಮಾತನಾಡಿದರು. ಜೊತೆಗೆ ಕುಂಡಲೀನಿ ಮತ್ತು ಪೂರ್ವ ಜನ್ಮದ ಕುರಿತು ಮಾಹಿತಿ ನೀಡಿದರು.
ದಶಾಂಬಿಕೋತ್ಸವ ಕಾರ್ಯಕ್ರಮ ಸಮಿತಿ ಅಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆ, ಅಂಬಿಕಾ ಸಮೂಹಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಅಂಬಿಕಾ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ, ನ್ಯಾಯವಾದಿ ಸೀಮಾ ನಾಗರಾಜ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here