ಒಕ್ಕಲಿಗ ಸ್ವಸಹಾಯ ಸಂಘಗಳ ಕಬಕ ಒಕ್ಕೂಟ-ಕಬಕ ಗ್ರಾಮ ಸಮಿತಿ, ಯುವ ಸಮಿತಿ ಮಹಿಳಾ ಘಟಕದ ಪದಗ್ರಹಣ

0

ಪುತ್ತೂರು: ಒಕ್ಕಲಿಗ ಸ್ವಸಹಾಯ ಸಂಘಗಳ ಕಬಕ ಒಕ್ಕೂಟ ಮತ್ತು ಕಬಕ ಗ್ರಾಮ ಸಮಿತಿ ಯುವ ಸಮಿತಿ ಮಹಿಳಾ ಘಟಕದ ಪದಗ್ರಹಣ ಕಾರ್ಯಕ್ರಮ ಮುರ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆಯಿತು. ಗ್ರಾಮ ಸಮಿತಿ ಅಧ್ಯಕ್ಷ ಕೊರಗಪ್ಪ ಗೌಡ ಫಿಲಿಮಾರು ಕಾರ್ಯಕ್ರಮ ಉದ್ಘಾಟಿಸಿದರು.


ಒಕ್ಕಲಿಗ ಸ್ವಸಹಾಯ ಸಂಘಗಳ ಕಬಕ ಒಕ್ಕೂಟದ ಅಧ್ಯಕ್ಷರಾಗಿ ಗಣೇಶ್ ಗೌಡ ಪೋಳ್ಯ, ಪ್ರಧಾನ ಕಾರ್ಯದರ್ಶಿಯಾಗಿ ಲೇಖ ಗೋವರ್ಧನ ಕಲ್ಲೇಗ, ಉಪಾಧ್ಯಕ್ಷೆಯಾಗಿ ಜಯಂತಿ ಕಳಮೆಮಜಲು, ಜೊತೆ ಕಾರ್ಯದರ್ಶಿಯಾಗಿ ಜಯಶ್ರೀ ಪೋಳ್ಯ, ಕೋಶಾಧಿಕಾರಿಯಾಗಿ ಆಶಾಲತಾ ಆಲದಗುಂಡಿ ಅಧಿಕಾರ ಸ್ವೀಕರಿಸಿದರು.

ಕಬಕ ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಅನಿಲ್ ಶೇವಿರೆ, ಕಾರ್ಯದರ್ಶಿಯಾಗಿ ರುಕ್ಮಯ ಗೌಡ ಪೋಳ್ಯ, ಯುವ ಸಮಿತಿಯ ನೂತನ ಅಧ್ಯಕ್ಷರಾಗಿ ಲೋಕೇಶ್ ಗೌಡ ಬನ, ಕಾರ್ಯದರ್ಶಿಯಾಗಿ ಪ್ರಶಾಂತ್ ಗೌಡ ಮೂವಳ, ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಗೀತಾ ಕೆ ಕಳಮೆಮಜಲು, ಕಾರ್ಯದರ್ಶಿಯಾಗಿ ಪುಷ್ಪಾವತಿ ಕಬಕಬೈಲು ಅಧಿಕಾರ ಸ್ವೀಕರಿಸಿದರು.


ಒಕ್ಕೂಟದ ಅಧ್ಯಕ್ಷ ಸೀನಪ್ಪ ಗೌಡ ಪೋಳ್ಯ ಅಧ್ಯಕ್ಷತೆ ವಹಿಸಿದ್ದರು. ಒಕ್ಕಲಿಗ ಸ್ವಸಹಾಯ ಸಲಹಾ ಟ್ರಸ್ಟಿನ ಸದಸ್ಯರಾದ ವೆಂಕಪ್ಪಗೌಡ ಕೆಯ್ಯೂರು, ಕಬಕ ಗ್ರಾಮದ ಊರ ಗೌಡರಾದ ಜಿನ್ನಪ್ಪ ಗೌಡ ಕಲ್ಲೇಗ ಮತ್ತು ಬಾಬುಗೌಡ ನೆಕ್ಕರೆ, ಒಕ್ಕೂಟ ಪದಾಧಿಕಾರಿಗಳಾದ ಕವಿತಾ ಬಿ ನೆಕ್ಕರೆ (ಪ್ರಧಾನ ಕಾರ್ಯದರ್ಶಿ) ಗಣೇಶ್ ಗೌಡ ಕಾಯರಬಳ್ಳಿ (ಉಪಾಧ್ಯಕ್ಷರು) ಗೀತಾ ಕಳಮೆಮಜಲು (ಜೊತೆ ಕಾರ್ಯದರ್ಶಿ) ಹೇಮಂತ್ ಗೌಡ (ಕೋಶಾಧಿಕಾರಿ) ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಗೀತಾ, ಪುಷ್ಪಾವತಿ, ಲತಾ ಧರ್ಮಪಾಲ ಗೌಡ, ನಮಿತಾ ಪ್ರಾರ್ಥಿಸಿದರು. ಲೇಖ ಗೋವರ್ಧನ ಚಿಂತನ ನಡೆಸಿದರು. ಪುಷ್ಪಾವತಿ ಕಬಕಬೈಲು ಸ್ವಾಗತಿಸಿದರು. ಲತಾ ಧರ್ಮಪಾಲ ಗೌಡ ಕಲ್ಲೆಗ ವಂದಿಸಿದರು. ಸುಮಲತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here