14ರ ವಯೋಮಾನದ ಮೈಸೂರು ವಿಭಾಗೀಯ ಬಾಲಕರ ತ್ರೋಬಾಲ್ ಪಂದ್ಯಾಟ – ಇಂದ್ರಪ್ರಸ್ಥ ತಂಡಕ್ಕೆ ರನ್ನರ್ ಆಫ್ ಪ್ರಶಸ್ತಿ

0

ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಾಸನದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ 14ರ ವಯೋಮಾನದ ಬಾಲಕರ ವಿಭಾಗವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಈ ತಂಡದಲ್ಲಿ 8ನೇ ತರಗತಿಯ ಕವೀಶ್ ಬಿ.ಕೆ, ಆಯುಶ್ ಎಸ್ ಶೆಟ್ಟಿ, 7ನೇ ತರಗತಿಯ ಸಮೃದ್ಧ ಜೈನ್, ಮೊಹಮ್ಮದ್ ಅಝ್ಮಲ್, ಶ್ರೇಯಸ್ಸ್, 6ನೇ ತರಗತಿಯ ಆಯತ್ತುಲ್ಲಾ ಸಲೀಂ, ಶಿಶಿರ್ ಜೆ.ಸಲ್ಯಾನ್, 6ನೇ ತರಗತಿಯ ಮೊಹಮ್ಮದ್ ಇರಾಝ್ ತಂಡದಲ್ಲಿ ಭಾಗವಹಿಸಿರುತ್ತಾರೆ. 17ರ ವಯೋಮಾನದ ಬಾಲಕರ ವಿಭಾಗದಲ್ಲಿ 8ನೇ ತರಗತಿಯ ಚಿಂತನ್ ಕೆ.ಸಿ, 9ನೇ ತರಗತಿಯ ಅಕ್ಷಜ್ ಶೆಟ್ಟಿ, 10ನೇ ತರಗತಿಯ ಮೊಹಮ್ಮದ್ ರೈಫ್ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ, ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾ ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here