ಬೇರಿಕೆ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ

0

ಪುತ್ತೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪುತ್ತೂರು ಶಿಶು ಅಭಿವೃದ್ಧಿ ಯೋಜನೆ,ಬನ್ನೂರು ಗ್ರಾಮ ಪಂಚಾಯತ್‌ ಇದರ ಸಂಯುಕ್ತ ಆಶ್ರಯದಲ್ಲಿ ಬಾಲಮೇಳ ಕಾರ್ಯಕ್ರಮ 2023 ಡಿ.17ರಂದು ಬೇರಿಕೆ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಭವ್ಯ ವಿಶ್ವನಾಥ್‌ ಕುಂಟ್ಯಾನ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬನ್ನೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸ್ಮಿತಾ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು ಅಂಗನವಾಡಿ ಕೇಂದ್ರಗಳಿಂದ ಮಕ್ಕಳಿಗೆ ಮತ್ತು ಅವರ ತಾಯಂದಿರಿಗೆ ಬಲು ಉಪಯೋಗವಾಗುತ್ತಿದೆ ಎಂದರು.ಭವ್ಯ ವಿಶ್ವನಾಥ್‌ ಪ್ರಾಸ್ತಾವಿಕವಾಗಿ ಮಾತನಾಡಿ ಅಂಗನವಾಡಿಗೆ ಸ್ಮಾರ್ಟ್‌ ಕ್ಲಾಸ್‌ ಕುರಿತು ಪ್ರಸ್ತಾವಣೆಗೈದರು.ಬನ್ನೂರು ಗ್ರಾಮ ಪಂ ಉಪಾಧ್ಯಕ್ಷ ಶೀನಪ್ಪ ಕುಲಾಲ್‌,ಬನ್ನೂರು ಗ್ರಾ.ಪಂ ಪಿಡಿಒ ಚಿತ್ರಾವತಿ, ಸದಸ್ಯರಾದ ಸುಪ್ರೀತಾ, ಹರಿಣಾಕ್ಷಿ ಡೀಕಯ್ಯ ಪೂಜಾರಿ,ಇತರ ಸದಸ್ಯರು ಉಪಸ್ಥಿತರಿದ್ದರು.

ಸನ್ಮಾನ: ಪುತ್ತೂರು ನಿವೃತ್ತ ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿಯಾಗಿದ್ದ ಭಾರತಿ ಜೆ.ಎ ರಿಗೆ ಸನ್ಮಾನ ನಡೆಯಿತು.

ರತ್ನಾಕರ ಪ್ರಭು ಸ್ವಾಗತಿಸಿ, ಶೀನಪ್ಪ ಕುಲಾಲ್‌ ಬದಿಯಡ್ಕ ವಂದಿಸಿದರು.ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕ್ರಾರ್ಯಕ್ರಮ ನಡೆಯಿತು.ಅಂಗನವಾಡಿ ಕಾರ್ಯಕರ್ತೆ ರೇಖಾ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.ಗಿರೀಶ್‌ ಕುಲಾಲ್‌ ಬದಿಯಡ್ಕ ಹಾಗೂ ರಮೇಶ್‌ ನಿರೂಪಿಸಿದರು.

LEAVE A REPLY

Please enter your comment!
Please enter your name here