ಪಡ್ನೂರು ಶ್ರೀರಾಮ್ ಫ್ರೆಂಡ್ಸ್ ವಾರ್ಷಿಕ ಮಹಾಸಭೆ

0

ಅಧ್ಯಕ್ಷ – ಶಿಶಿರ್ ಪೆರ್ವೊಡಿ,ಪ್ರ.ಕಾರ್ಯದರ್ಶಿ – ಕೀರ್ತಿಕ್ ಕುಂಜಾರು,ಖಜಾಂಚಿ – ರತನ್ ಕುಂಜಾರು

ಪುತ್ತೂರು :ಪಡ್ನೂರು ಶ್ರೀರಾಮ್ ಫ್ರೆಂಡ್ಸ್ ಇದರ ಮಹಾಸಭೆಯೂ ಇತ್ತೀಚೆಗೆ ಪಡ್ನೂರು ಪೆರ್ವೊಡಿಯಲ್ಲಿ ನಡೆದು,ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನಿಕಟ ಪೂರ್ವ ಅಧ್ಯಕ್ಷ ಯತೀಶ್ ಪಂಜಿಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ಸಂಚಾಲಕ ವಿಶ್ವನಾಥ ಪಂಜಿಗುಡ್ಡೆ, ಗೌರವಾಧ್ಯಕ್ಷ ನವೀನ್ ಪಡ್ನೂರು, ಅವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಶಿಶಿರ್ ಪೆರ್ವೊಡಿ, ಪ್ರಧಾನ ಕಾರ್ಯದರ್ಶಿಯಾಗಿ ಕೀರ್ತಿಕ್ ಕುಂಜಾರು, ಖಜಾಂಜಿಯಾಗಿ ರತನ್ ಕುಂಜಾರು ಮತ್ತು ಮತ್ತು ಉಪಾಧ್ಯಕ್ಷರಾಗಿ ಸುಹನ್ ಕುಂಜಾರು ಮತ್ತು ಕಾರ್ತಿಕ್ ಪೆರ್ವೊಡಿ ಅಲ್ಲದೆ ಜೊತೆ ಕಾರ್ಯದರ್ಶಿಯಾಗಿ ಸವಿನ್ ಕುಂಜಾರು, ರಂಜನ್ ಪೊಟ್ಟಗೊಳಿ , ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಾರ್ತಿಕ್ ಅಂಡೆಪುಣಿ, ಕಿರಣ್ ಪಂಜಿಗುಡ್ಡೆ, ಸಂಘಟನೆ ಕಾರ್ಯದರ್ಶಿಯಾಗಿ ಮಹಾಬಲ ಪಂಜಿಗುಡ್ಡೆ, ಹೇಮಚಂದ್ರ ಕುಂಬಾಡಿ, ಕ್ರೀಡಾಕಾರ್ಯದರ್ಶಿಯಾಗಿ ವಸಂತ ಮುಂಡಾಜೆ, ಸೋಶಿಯಲ್ ಮೀಡಿಯಾ ಕಾರ್ಯದರ್ಶಿಯಾಗಿ ಮುಖೇಶ್ ಪೆರ್ವೊಡಿ , ಧರ್ಮರಾಜ್ ಬೇರಿಕೆ ಹಾಗೂ ಸಾಮಾಜಿಕ ಕಾರ್ಯದರ್ಶಿಯಾಗಿ ಅಭಿಷೇಕ್ ಬೇರಿಕೆ ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಶ್ರೀನಿವಾಸ ಪೆರ್ವೊಡಿ, ಉಮೇಶ್ ಬಂಗೇರ ಕುಂಜಾರು ವಿನೋದ್ ಕುಂಜಾರು, ಕೃಷ್ಣಮೂರ್ತಿ ಪಂಜಿಗುಡ್ಡೆ ಇವರುಗಳನ್ನು ಆಯ್ಕೆ ಮಾಡಲಾಯಿತು. ಸಂದರ್ಭದಲ್ಲಿ ಸಹ ಸಂಚಾಲಕರಾದ ಮೋಹನದಾಸ , ಲೋಕೇಶ್ ಮುಂಡಾಜೆ ಸಹಿತ ಹಲವು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here