ಪಡ್ನೂರು ಶ್ರೀ ರಾಮ್ ಫ್ರೆಂಡ್ಸ್ ಇದರ ವಾರ್ಷಿಕೋತ್ಸವ ಆಮಂತ್ರಣ ಬಿಡುಗಡೆ

0

ಪುತ್ತೂರು : ಪಡ್ನೂರು ಶ್ರೀರಾಮ್ ಫ್ರೆಂಡ್ಸ್ (ರಿ) ಇದರ 11ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯ ಕುಂಜಾರು ಮದಗ ಶ್ರೀ ಜನಾರ್ಧನ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ನಡೆಯಿತು.
ದೇವಾಲಯದ ಪ್ರಧಾನ ಅರ್ಚಕ ಶ್ರೀಕಾಂತ್ ಭಟ್ ಆಮಂತ್ರಣ ಬಿಡುಗಡೆಗೊಳಿಸಿ , ಶುಭ ಹಾರೈಸಿದರು.
ಈ ಸಂದರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀಧರ್ ಕುಂಜಾರು, ಸಂಘಟನೆಯ ಸಂಚಾಲಕರಾದ ವಿಶ್ವನಾಥ ಪಂಜಿಗುಡ್ಡೆ, ಅಧ್ಯಕ್ಷ ಶಿಶಿರ್ ಪೆರ್ವೊಡಿ , ಗೌರವಧ್ಯಕ್ಷ ನವೀನ್ ಪಡ್ನೂರು, ಗೌರವ ಸಲಹೆಗಾರ ವಿನೋದ್ ಕುಂಜಾರು ಉಮೇಶ್ ಬಂಗೇರ ಕುಂಜಾರು , ಪ್ರಧಾನ ಕಾರ್ಯದರ್ಶಿ ಕೀರ್ತಿಕ್ ಕುಂಜಾರು , ಖಜಾಂಜಿ ರತನ್ ಕುಂಜಾರು, ಸಂಘಟನಾ ಕಾರ್ಯದರ್ಶಿ ಮಹಾಬಲ ಪಂಜಿಗುಡ್ಡೆ, ಕ್ರೀಡಾ ಕಾರ್ಯದರ್ಶಿ ವಸಂತ ಮುಂಡಾಜೆ , ಸಾಂಸ್ಕೃತಿಕ ಕಾರ್ಯದರ್ಶಿ ಕಾರ್ತಿಕ್ ಅಂಡೆಪುಣಿ , ಸಹ ಸಂಚಾಲಕ ಮೋಹನ್ ದಾಸ ರಾಮನಗರ, ಸದಸ್ಯರಾದ ರಸ್ವಿನ್ ಕುಂಜಾರು, ತೀರ್ಥ ಪ್ರಸಾದ್ ಮುಂಡಾಜೆ, ನಯನ ದೇಮೇರು, ಮಿಥುನ್ ಮುಂಡಾಜೆ, ವಿಶ್ವನಾಥ ಶಾಲಾ ಬಳಿ, ಪ್ರಕಾಶ್ ಮುಂಡಾಜೆ, ವಿಶ್ವರಾಜ್ ಕುಂಜಾರು ಉಪಸಿತರಿದ್ದರು.

LEAVE A REPLY

Please enter your comment!
Please enter your name here