ಸುದ್ದಿ ಬಿಡುಗಡೆ 2024ರ ಕ್ಯಾಲೆಂಡರ್ ಬಿಡುಗಡೆ

0

ಪುತ್ತೂರು: ಸುದ್ದಿ ಯುಟ್ಯೂಬ್ ಚಾನೆಲ್, ಕೇಬಲ್ ಚಾನೆಲ್, ವೆಬ್ ಸೈಟ್, ಮಾಹಿತಿ ಕೇಂದ್ರ, ಕೃಷಿ ಅರಿವು ಕೇಂದ್ರ ಸಹಿತ ಹಲವು ಕ್ಷೇತ್ರದಲ್ಲಿ ಕಾರ್ಯಚರಿಸುತ್ತಿರುವ ಸುದ್ದಿ ಬಿಡುಗಡೆ ದಿನ ಪತ್ರಿಕೆಯ ವತಿಯಿಂದ ಹೊರ ತರಲಾದ 2024ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಡಿ.19ರಂದು ಸುದ್ದಿ ಬಿಡುಗಡೆ ಪ್ರಧಾನ ಕಛೇರಿಯಲ್ಲಿ ನಡೆಯಿತು.


ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರೂ ಆಗಿರುವ ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ ಡಾ.ಯು.ಪಿ. ಶಿವಾನಂದ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭ ಸಿಬ್ಬಂದಿಗಳಾದ ರಾಜೇಶ್ ಎಂ.ಎಸ್., ಶಿವಕುಮಾರ್ ಈಶ್ವರಮಂಗಲ, ಶ್ರೀಧರ್ ರೈ ಕೋಡಂಬು, ಲೋಕೇಶ್ ಬನ್ನೂರು, ಸುದ್ದಿ ಚಾನೆಲ್ ನಿರೂಪಕ ಉಮೇಶ್ ಮಿತ್ತಡ್ಕ, ಕ್ಯಾಲೆಂಡರ್ ಡಿಸೈನರ್ ಚಂದ್ರಕಾಂತ್ ಉರ್ಲಾಂಡಿ, ಯತೀಶ್ ಉಪ್ಪಳಿಗೆ, ಮೋಹನ್ ಶೆಟ್ಟಿ, ವಸಂತ್ ಸಾಮೆತ್ತಡ್ಕ, ಪ್ರಶಾಂತ್ ಮಿತ್ತಡ್ಕ, ಪ್ರಜ್ವಲ್, ನರೇಶ್ ಜೈನ್, ಪಿ.ಎಸ್ ಭಟ್, ಶೈಲಜಾ ಸುದೇಶ್, ಕವಿತಾ ವಿಶ್ವನಾಥ್, ರಕ್ಷಿತಾ, ಅಕ್ಷತಾ, ಚಿತ್ರಾಂಗಿನಿ, ಕಾವ್ಯ, ಜಯಲಕ್ಷ್ಮೀ, ಪ್ರೀತಾ, ಲತಾಶ್ರೀ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here