ಕುಂಬ್ರ ಕೆಐಸಿ ಸನದುದಾನ ಮಹಾಸಮ್ಮೇಳನ-ವರ್ತಕರ ಸಂಘದಿಂದ ಅಕ್ಕಿ ಕೊಡುಗೆ

0

ಪುತ್ತೂರು: ದ.20 ರಿಂದ 23 ರ ತನಕ ನಡೆಯಲಿರುವ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಕುಂಬ್ರ ಇದರ 4 ನೇ ಸನದುದಾನ ಮಹಾಸಮ್ಮೇಳನದ ಅಂಗವಾಗಿ ಕುಂಬ್ರ ವರ್ತಕರ ಸಂಘದಿಂದ ಅಕ್ಕಿ ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಕೆಐಸಿ ಸಂಘಟನಾ ಕಾರ್ಯದರ್ಶಿ ಅನೀಶ್ ಕೌಸರಿ, ಕೆಐಸಿ ವ್ಯವಸ್ಥಾಪಕ ಅಬ್ದುಲ್ ಸತ್ತಾರ್ ಕೌಸರಿ, ಬಶೀರ್ ಕೌಡಿಚ್ಚಾರ್, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ, ಕೋಶಾಧಿಕಾರಿ ಸಂಶುದ್ದೀನ್ ಎ.ಆರ್, ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕುರಿಕ್ಕಾರ, ದಿವಾಕರ ಶೆಟ್ಟಿ, ಮೆಲ್ವಿನ್ ಮೊಂತೆರೋ, ಉಪಾಧ್ಯಕ್ಷ ಉದಯ ಆಚಾರ್ಯ ಕೃಷ್ಣನಗರ, ಸದಸ್ಯರುಗಳಾದ ಹನೀಫ್, ಅಬ್ದುಲ್ಲಾ ಬೊಳ್ಳಾಡಿ ಮತ್ತಿತರರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here