ಕಂರ್ಬಡ್ಕ ಚಂದ್ರಾವತಿಯವರ ಶ್ರದ್ದಾಂಜಲಿ ಸಭೆ

0

ಪುತ್ತೂರು: ಡಿ.12 ರಂದು ನಿಧನರಾದ ನಿವೃತ್ತ ಉಪ ತಹಾಶೀಲ್ದಾರ್ ಪಾದೆ ಚಂದ್ರಶೇಖರ್ ನಾೖಕ್‌ ಕಂರ್ಬಡ್ಕರವರ ಪತ್ನಿ ಚಂದ್ರಾವತಿಯವರ ಉತ್ತರ ಕ್ರೀಯೆ ಹಾಗೂ ಶ್ರದ್ದಾಂಜಲಿ ಸಭೆ ಡಿ.22 ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.

ನುಡಿ ನಮನ ಸಲ್ಲಿಸಿದ ಮೃತರ ಅಳಿಯ ನಿವೃತ್ತ ಶಿಕ್ಷಕ ಉದಯಶಂಕರ್ ನಾೖಕ್‌ ಮಾತನಾಡಿ ಉತ್ತಮ ಗ್ರಹಿಣೆಯಾಗಿ,ಕೃಷಿಕರಾಗಿ,ಎಲ್ಲರೊಂದಿಗೂ ಆತ್ಮೀಯ ಒಡನಾಟವನ್ನು ಹೊಂದಿ, ತುಂಬು ಸಂಸಾರವನ್ನು ಮುನ್ನಡೆಸಿ, ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಬೆಳೆಸಿ, ಮುತ್ತೈದೆಯಾಗಿ ನಮ್ಮನ್ನಗಲಿದ ನಿಮ್ಮ ದಿವ್ಯಾತ್ಮ ಭಗವಂತನ ಸನ್ನಿಧಿಯಲ್ಲಿ ಚಿರಶಾಂತಿಯಲ್ಲಿ ಎಂದರು. ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಚಂದ್ರಾವತಿ ಯವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.


ಮೃತರ ಪತಿ ಪಾದೆ ಚಂದ್ರಶೇಖರ ನಾೖಕ್‌ ಕಂರ್ಬಡ್ಕ, ಪುತ್ರರಾದ ರಾಜೇಶ್ ನಾೖಕ್‌ ,ಪ್ರಿಯೇಶ್ ನಾೖಕ್‌, ಪುತ್ರಿ ವಿದ್ಯಾಶ್ರೀ ಉದಯಶಂಕರ್ ನಾೖಕ್‌ , ಅಳಿಯ ಉದಯಶಂಕರ್ ನಾೖಕ್‌ ಟಿ. ತುಪ್ಪೆ ಮಂಗಳೂರು, ಸೊಸೆಯಂದಿರಾದ ನೀತು ರಾಜೇಶ್ ನಾೖಕ್‌, ಅಂಕಿತಾ ಪ್ರಿಯೇಶ್ ನಾೖಕ್‌, ಮೊಮ್ಮಕ್ಕಳಾದ ನಿರೀಕ್ಷಾ ಶರ್ಮಿತ್, ಶರ್ಮಿತ್ ಕೆ. ಕಡಬ, ವಿಸ್ಮಯ್ ನಾೖಕ್‌ ಟಿ., ವಿಖ್ಯಾತ್ ನಾೖಕ್‌ ಟಿ., ಮನಸ್ವಿ ನಾೖಕ್‌ ಪಿ., ನಿನಾದ್ ನಾೖಕ್‌ ಪಿ. ಮರಿ ಮೊಮ್ಮಗ ಶಿವಾಕ್ಷ್ ನಾೖಕ್‌ ಕೆ. ಹಾಗೂ ಕುಟುಂಬಸ್ಥರು,ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here